‘ವಾಲ್ಮೀಕಿ ಸಮುದಾಯವು ತುಂಬಾ ಹಿಂದುಳಿದಿದ್ದು, ದುರ್ಬಲವಾಗಿದೆ. ಈ ಸಮುದಾಯಮುಂದುವರಿಯಬೇಕು. ದಲಿತರನ್ನು, ಪರಿಶಿಷ್ಟರನ್ನು ಮೇಲೆತ್ತಲು ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಇಂದು ಅವರಿಗೆ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದೆ. ಹಾಗೆಯೇ ಸಾಮಾಜಿಕ ಸ್ವಾತಂತ್ರ್ಯವೂ ಸಿಗಬೇಕು.ಅದಕ್ಕಾಗಿ ಸರ್ಕಾರವು ಕಾನೂನುಗಳನ್ನು ಜಾರಿಗೊಳಿಸಿದೆ. ಇದಷ್ಟೇ ಸಾಲದು, ನಿಜವಾದ ಸಮಾನತೆ, ಸಾಮಾಜಿಕ ಸ್ವಾತಂತ್ರ್ಯಯಾರಿಗೆ ಸಲ್ಲಬೇಕೋ ಅವರಿಗೆ ಸಲ್ಲುವಂತೆ ಮಾಡಲು ಮನಸ್ಥಿತಿಗಳೂ ಬದಲಾಗಬೇಕು. ಇಲ್ಲದಿದ್ದರೆ ಕಾನೂನುಗಳಿಗೆ ಅರ್ಥವೇ ಇರುವುದಿಲ್ಲ’ ಎಂದರು.