<p><strong>ಪಟ್ನಾ</strong>: ಬಿಹಾರ ವಿಧಾನಸಭೆಯ ಮುಂಗಾರು ಅಧಿವೇಶನ ಸೋಮವಾರ ಪ್ರಾರಂಭಗೊಂಡಿದ್ದು, ಮೊದಲ ದಿನವೇ ಆರ್ಜೆಡಿಯ ಶಾಸಕರು ಕಪ್ಪು ಮಾಸ್ಕ್ ಮತ್ತು ಹೆಲ್ಮೆಟ್ ಧರಿಸುವ ಮೂಲಕ ಸುಮಾರು ನಾಲ್ಕು ತಿಂಗಳ ಹಿಂದೆ ಸದನದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿದರು.</p>.<p>ಮಾರ್ಚ್ 23ರಂದು ವಿವಾದಾತ್ಮಕ ಮಸೂದೆಯೊಂದು ಸದನದಲ್ಲಿ ಅಂಗೀಕಾರ ಆಗದಂತೆ ತಡೆಯಲು ಸ್ಪೀಕರ್ ಅವರನ್ನು ಒತ್ತೆಯಾಳಾಗಿ ಇರಿಸಲುಆರ್ಜೆಡಿ ಶಾಸಕರು ಪ್ರಯತ್ನಿಸಿದರು ಎಂಬ ಕಾರಣಕ್ಕೆ ಸದನದೊಳಗೆ ಬಂದ ಪೊಲೀಸರು, ಆರ್ಜೆಡಿ ಪಕ್ಷದ ಶಾಸಕರಿಗೆ ಥಳಿಸಿದ್ದನ್ನು ಖಂಡಿಸಲಾಯಿತು.</p>.<p>ಈ ಘಟನೆಯನ್ನು ನೆನಪಿಸಿಕೊಂಡ ಆರ್ಜೆಡಿ ಶಾಸಕರು, ‘ಈ ಸರ್ಕಾರ ಅದೇ ರೀತಿ ನಮ್ಮ ಮೇಲೆ ದಾಳಿ ನಡೆಸಬಹುದೆಂದು ನಾವೆಲ್ಲ ಭಯಭೀತರಾಗಿದ್ದೇವೆ’ ಎಂದರು.</p>.<p>‘ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ಷಮೆಯಾಚನೆಯಿಂದ ಈ ವಿಷಯ ಅಂತ್ಯವಾಗುವುದಿಲ್ಲ. ಈ ಸಂಬಂಧ ತೇಜಸ್ವಿ ಯಾದವ್ ಅವರು ಸದನದಲ್ಲಿ ನಿರ್ಣಯವೊಂದನ್ನು ಮಂಡಿಸಲಿದ್ದಾರೆ’ ಎಂದು ಆರ್ಜೆಡಿ ಪಕ್ಷದ ವಕ್ತಾರ ಭಾಯಿ ವಿರೇಂದ್ರ ಅವರು ವರದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ</strong>: ಬಿಹಾರ ವಿಧಾನಸಭೆಯ ಮುಂಗಾರು ಅಧಿವೇಶನ ಸೋಮವಾರ ಪ್ರಾರಂಭಗೊಂಡಿದ್ದು, ಮೊದಲ ದಿನವೇ ಆರ್ಜೆಡಿಯ ಶಾಸಕರು ಕಪ್ಪು ಮಾಸ್ಕ್ ಮತ್ತು ಹೆಲ್ಮೆಟ್ ಧರಿಸುವ ಮೂಲಕ ಸುಮಾರು ನಾಲ್ಕು ತಿಂಗಳ ಹಿಂದೆ ಸದನದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿದರು.</p>.<p>ಮಾರ್ಚ್ 23ರಂದು ವಿವಾದಾತ್ಮಕ ಮಸೂದೆಯೊಂದು ಸದನದಲ್ಲಿ ಅಂಗೀಕಾರ ಆಗದಂತೆ ತಡೆಯಲು ಸ್ಪೀಕರ್ ಅವರನ್ನು ಒತ್ತೆಯಾಳಾಗಿ ಇರಿಸಲುಆರ್ಜೆಡಿ ಶಾಸಕರು ಪ್ರಯತ್ನಿಸಿದರು ಎಂಬ ಕಾರಣಕ್ಕೆ ಸದನದೊಳಗೆ ಬಂದ ಪೊಲೀಸರು, ಆರ್ಜೆಡಿ ಪಕ್ಷದ ಶಾಸಕರಿಗೆ ಥಳಿಸಿದ್ದನ್ನು ಖಂಡಿಸಲಾಯಿತು.</p>.<p>ಈ ಘಟನೆಯನ್ನು ನೆನಪಿಸಿಕೊಂಡ ಆರ್ಜೆಡಿ ಶಾಸಕರು, ‘ಈ ಸರ್ಕಾರ ಅದೇ ರೀತಿ ನಮ್ಮ ಮೇಲೆ ದಾಳಿ ನಡೆಸಬಹುದೆಂದು ನಾವೆಲ್ಲ ಭಯಭೀತರಾಗಿದ್ದೇವೆ’ ಎಂದರು.</p>.<p>‘ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ಷಮೆಯಾಚನೆಯಿಂದ ಈ ವಿಷಯ ಅಂತ್ಯವಾಗುವುದಿಲ್ಲ. ಈ ಸಂಬಂಧ ತೇಜಸ್ವಿ ಯಾದವ್ ಅವರು ಸದನದಲ್ಲಿ ನಿರ್ಣಯವೊಂದನ್ನು ಮಂಡಿಸಲಿದ್ದಾರೆ’ ಎಂದು ಆರ್ಜೆಡಿ ಪಕ್ಷದ ವಕ್ತಾರ ಭಾಯಿ ವಿರೇಂದ್ರ ಅವರು ವರದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>