<p class="title"><strong>ನವದೆಹಲಿ (ಪಿಟಿಐ):</strong> ಸಂಸದರ ವಾಸ್ತವ್ಯಕ್ಕಾಗಿ ರಾಜಧಾನಿಯಲ್ಲಿ ನಿರ್ಮಿಸಿರುವ 76 ವಸತಿಗಳ ಬಹುಮಹಡಿ ಸಮುಚ್ಚಯವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ಸ್ಥಳದಲ್ಲಿದ್ದ 80 ವರ್ಷ ಹಳೆಯದಾದ ಬಂಗಲೆ ನೆಲಸಮಗೊಳಿಸಿ ಸಮುಚ್ಚಯ ನಿರ್ಮಿಸಲಾಗಿದೆ.</p>.<p class="title">ಈ ಸಂದರ್ಭದಲ್ಲಿ ಮಾತನಾಡಿದ ಅವರು 2014ರಲ್ಲಿ ತಮ್ಮ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಮುಖ ಕಾಯ್ದೆಗಳನ್ನು ರೂಪಿಸಲಾಗಿದೆ. ಅನೇಕ ಕಾಮಗಾರಿಗಳು ಮುಗಿದಿವೆ. ದೇಶದ ಅಭಿವೃದ್ಧಿಯಲ್ಲಿ ಈ ಅವಧಿಯು ಐತಿಹಾಸಿಕವಾದುದು’ ಎಂದು ಬಣ್ಣಿಸಿದರು.</p>.<p class="title">ಯುವಜನರಿಗೆ 16 ರಿಂದ 18ರ ವಯೋಮಾನ ಮುಖ್ಯವಾದುದು ಎಂದು ಉಲ್ಲೇಖಿಸಿದ ಅವರು, ಅಂತೆಯೇ ಭಾರತದಂಥ ಯುವ ದೇಶದ ಅಭಿವೃದ್ಧಿಯಲ್ಲಿ 16 ಮತ್ತು 18ನೇ ಲೋಕಸಭೆಯೂ ಮುಖ್ಯವಾದುದಾಗಲಿದೆ ಎಂದು ಹೇಳಿದರು.</p>.<p>ನಾವು ಸಾಧಿಸಬೇಕಾದುದು ಇನ್ನೂ ಸಾಕಷ್ಟಿದೆ. ಅದು, ಆತ್ಮನಿರ್ಭರ ಭಾರತ್ ಅಭಿಯಾನ ಇರಬಹುದು, ಆರ್ಥಿಕತೆಯ ಗುರಿ ಇರಬಹುದು. ಪ್ರತಿಜ್ಞೆ ಮಾಡಿರುವ ಇಂಥ ಅನೇಕ ಸಾಧನೆಗಳನ್ನು ಈ ಅವಧಿಯಲ್ಲಿ ಮಾಡಬೇಕಾಗಿದೆ ಎಂದು ಹೇಳಿದರು.</p>.<p>ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರ, ಕೇಂದ್ರ ಮಾಹಿತಿ ಆಯೋಗ ಮತ್ತು ಯುದ್ಧ ಸ್ಮಾರಕ ನಿರ್ಮಾಣ ಪೂರ್ಣವಾದುದು ಸೇರಿ ಇನ್ನೂ ಅನೇಕ ಅಂಶಗಳನ್ನು ಅವರು ಉಲ್ಲೇಖಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ (ಪಿಟಿಐ):</strong> ಸಂಸದರ ವಾಸ್ತವ್ಯಕ್ಕಾಗಿ ರಾಜಧಾನಿಯಲ್ಲಿ ನಿರ್ಮಿಸಿರುವ 76 ವಸತಿಗಳ ಬಹುಮಹಡಿ ಸಮುಚ್ಚಯವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ಸ್ಥಳದಲ್ಲಿದ್ದ 80 ವರ್ಷ ಹಳೆಯದಾದ ಬಂಗಲೆ ನೆಲಸಮಗೊಳಿಸಿ ಸಮುಚ್ಚಯ ನಿರ್ಮಿಸಲಾಗಿದೆ.</p>.<p class="title">ಈ ಸಂದರ್ಭದಲ್ಲಿ ಮಾತನಾಡಿದ ಅವರು 2014ರಲ್ಲಿ ತಮ್ಮ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಮುಖ ಕಾಯ್ದೆಗಳನ್ನು ರೂಪಿಸಲಾಗಿದೆ. ಅನೇಕ ಕಾಮಗಾರಿಗಳು ಮುಗಿದಿವೆ. ದೇಶದ ಅಭಿವೃದ್ಧಿಯಲ್ಲಿ ಈ ಅವಧಿಯು ಐತಿಹಾಸಿಕವಾದುದು’ ಎಂದು ಬಣ್ಣಿಸಿದರು.</p>.<p class="title">ಯುವಜನರಿಗೆ 16 ರಿಂದ 18ರ ವಯೋಮಾನ ಮುಖ್ಯವಾದುದು ಎಂದು ಉಲ್ಲೇಖಿಸಿದ ಅವರು, ಅಂತೆಯೇ ಭಾರತದಂಥ ಯುವ ದೇಶದ ಅಭಿವೃದ್ಧಿಯಲ್ಲಿ 16 ಮತ್ತು 18ನೇ ಲೋಕಸಭೆಯೂ ಮುಖ್ಯವಾದುದಾಗಲಿದೆ ಎಂದು ಹೇಳಿದರು.</p>.<p>ನಾವು ಸಾಧಿಸಬೇಕಾದುದು ಇನ್ನೂ ಸಾಕಷ್ಟಿದೆ. ಅದು, ಆತ್ಮನಿರ್ಭರ ಭಾರತ್ ಅಭಿಯಾನ ಇರಬಹುದು, ಆರ್ಥಿಕತೆಯ ಗುರಿ ಇರಬಹುದು. ಪ್ರತಿಜ್ಞೆ ಮಾಡಿರುವ ಇಂಥ ಅನೇಕ ಸಾಧನೆಗಳನ್ನು ಈ ಅವಧಿಯಲ್ಲಿ ಮಾಡಬೇಕಾಗಿದೆ ಎಂದು ಹೇಳಿದರು.</p>.<p>ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರ, ಕೇಂದ್ರ ಮಾಹಿತಿ ಆಯೋಗ ಮತ್ತು ಯುದ್ಧ ಸ್ಮಾರಕ ನಿರ್ಮಾಣ ಪೂರ್ಣವಾದುದು ಸೇರಿ ಇನ್ನೂ ಅನೇಕ ಅಂಶಗಳನ್ನು ಅವರು ಉಲ್ಲೇಖಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>