ಉಭಯ ನಾಯಕರ ನಡುವಿನ ಬಾಂಧವ್ಯ, ಬೆಸುಗೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಯೋಗಿ ಆದಿತ್ಯನಾಥ್ ಅವರ ಟ್ವಿಟರ್ ಖಾತೆಯಲ್ಲಿ ಈ ಫೋಟೊಗಳನ್ನು ಹಂಚಿಕೊಳ್ಳಲಾಗಿದ್ದು, 'ನಮ್ಮ ತನು–ಮನವನ್ನು ಅರ್ಪಿಸುವ ಪ್ರಮಾಣದೊಂದಿಗೆ ನಾವು ಮುಂದುವರಿದಿದ್ದೇವೆ. ಹೊಸ ಸೂರ್ಯನನ್ನು ಉದಯಿಸುವ ಬದ್ಧತೆಯೊಂದಿಗೆ, ಆಕಾಶಕ್ಕಿಂತಲೂ ಎತ್ತರಕೆ ಏರುತ್ತ–ಹೊಸ ಭಾರತವನ್ನು ಕಟ್ಟಲು' ಎಂಬರ್ಥದ ಸಾಲುಗಳನ್ನು ಪ್ರಕಟಿಸಿದ್ದಾರೆ.