2019ರಲ್ಲಿ 61 ಜಿಲ್ಲೆಗಳಲ್ಲಿ ಹಾಗೂ 2020ರ ಮೊದಲಾರ್ಧದಲ್ಲಿ 46 ಜಿಲ್ಲೆಗಳಲ್ಲಿ ಉಗ್ರರ ಹಿಂಸಾಚಾರ ಘಟನೆಗಳು ನಡೆದಿರುವುದು ವರದಿಯಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. 2015 ರಿಂದ 2020ರ ಆಗಸ್ಟ್ 15 ರವರೆಗೆ ಎಲ್ಡಬ್ಲ್ಯುಇ ಪೀಡಿತ ಪ್ರದೇಶಗಳಲ್ಲಿ ನಡೆದ ಹಿಂಸಾಚಾರದಲ್ಲಿ 350 ಭದ್ರತಾ ಸಿಬ್ಬಂದಿ, 963 ನಾಗರಿಕರು ಮತ್ತು 871 ನಕ್ಸಲರು ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ ಒಟ್ಟು 4,022 ನಕ್ಸಲರು ಸಹ ಶರಣಾಗಿದ್ದಾರೆ ಎಂದು ರೆಡ್ಡಿ ಮಾಹಿತಿ ನೀಡಿದ್ದಾರೆ.