<p><strong>ಘಾಜಿಪುರ:</strong> ಭೂಮಿಯನ್ನು ಉಳುವಾಗ ಜನಕ ರಾಜನಿಗೆ ಸೀತೆ ಸಿಕ್ಕಿದ ಬಗ್ಗೆ ರಾಮಾಯಣದಲ್ಲಿ ಓದಿರುತ್ತೀರಿ. ಮಹಾಭಾರತದಲ್ಲಿ ಕುಂತಿ ಮದುವೆಗೂ ಮೊದಲು ಕರ್ಣನನ್ನು ಹಡೆದು ಗಂಗಾನದಿಯಲ್ಲಿ ತೇಲಿಬಿಟ್ಟಿದ್ದನ್ನು ಕೇಳಿರುತ್ತೀರಿ. ಆದರೆ ಪುರಾಣ ನೆನಪಿಸುವ ಇಂತಹದ್ದೇ ರೀತಿಯ ಘಟನೆ ಇಂದು ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.</p>.<p>ಉತ್ತರ ಪ್ರದೇಶದಲ್ಲಿ ಘಾಜಿಪುರ ಜಿಲ್ಲೆಯಲ್ಲಿ ಗಂಗಾ ನದಿಯಲ್ಲಿ ಹೆಣ್ಣು ಮಗುವೊಂದು ತೇಲಿಬಂದು ನಾವಿಕನ ಕೈಗೆ ಸಿಕ್ಕಿದ ವಿಸ್ಮಯ ಘಟನೆಯೊಂದು ವರದಿಯಾಗಿದೆ.</p>.<p>ಘಾಜಿಪುರ ಜಿಲ್ಲೆಯಲ್ಲಿ ದೋಣಿ ನಡೆಸುತ್ತಿದ್ದ ನಾವಿಕ ಗಂಗಾ ನದಿ ದಡದ ಸಮೀಪ ತೇಲಿಬಂದ ಮರದ ಪೆಟ್ಟಿಗೆಯನ್ನು ಗಮನಿಸಿದ್ದಾನೆ. ಅಳುತ್ತಿರುವ ಮಗುವಿನ ಧ್ವನಿಯೂ ಕೇಳಿಬಂದಾಗ ಕುತೂಹಲದಿಂದ ಮರದ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅಚ್ಚರಿಗೆ ಒಳಗಾಗಿದ್ದಾನೆ.</p>.<p>ಪೆಟ್ಟಿಗೆಯೊಳಗೆ ನವಜಾತ ಹೆಣ್ಣು ಮಗುವನ್ನು ಗಮನಿಸಿ ದೇವರ ಪವಾಡವೆಂದೇ ಗ್ರಹಿಸಿದ್ದಾನೆ. ವಿಚಾರ ತಿಳಿದ ಸುತ್ತಮುತ್ತಲಿನವರು ಆಗಮಿಸಿ ವಿಸ್ಮಯ ಘಟನೆಯನ್ನು ಕಣ್ತುಂಬಿಕೊಂಡಿದ್ದಾರೆ. ಮಗುವಿನ ಅಕ್ಕಪಕ್ಕ ದೇವರ ಫೋಟೊಗಳು, ಜನ್ಮಕುಂಡಲಿ ಮತ್ತು ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ.</p>.<p>ಪೆಟ್ಟಿಗೆಯೊಳಗೆ ಇಡಲಾಗಿರುವ ದೇವರ ಫೋಟೊಗಳು ಮತ್ತು ಸುರಕ್ಷಿತ ವ್ಯವಸ್ಥೆಯನ್ನು ಗಮನಿಸಿದಾಗ ಕೌಟುಂಬಿಕ ಸಂಕಷ್ಟದಿಂದ ಹೆಣ್ಣುಮಗುವನ್ನು ಸಾಕಲು ಸಾಧ್ಯವಾಗದೆ ದೇವರೇ ಸಾಕಿಕೊಳ್ಳುತ್ತಾನೆ ಎಂಬ ಆಶಾವಾದದಲ್ಲಿ ಪೆಟ್ಟಿಗೆಯೊಳಗಿಟ್ಟು ತೆಲಿಬಿಟ್ಟಿರಬಹುದು ಎಂದು ಅಂದಾಜಿಸಲಾಗಿದೆ.</p>.<p>ಆರೋಗ್ಯದಿಂದಿರುವ ಮಗುವನ್ನು ಪೊಲೀಸರು ಆಶಾ ಜ್ಯೋತಿ ಕೇಂದ್ರಕ್ಕೆ ನೀಡಿದ್ದಾರೆ ಎಂದು 'ಎಬಿಪಿಲೈವ್' ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಘಾಜಿಪುರ:</strong> ಭೂಮಿಯನ್ನು ಉಳುವಾಗ ಜನಕ ರಾಜನಿಗೆ ಸೀತೆ ಸಿಕ್ಕಿದ ಬಗ್ಗೆ ರಾಮಾಯಣದಲ್ಲಿ ಓದಿರುತ್ತೀರಿ. ಮಹಾಭಾರತದಲ್ಲಿ ಕುಂತಿ ಮದುವೆಗೂ ಮೊದಲು ಕರ್ಣನನ್ನು ಹಡೆದು ಗಂಗಾನದಿಯಲ್ಲಿ ತೇಲಿಬಿಟ್ಟಿದ್ದನ್ನು ಕೇಳಿರುತ್ತೀರಿ. ಆದರೆ ಪುರಾಣ ನೆನಪಿಸುವ ಇಂತಹದ್ದೇ ರೀತಿಯ ಘಟನೆ ಇಂದು ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.</p>.<p>ಉತ್ತರ ಪ್ರದೇಶದಲ್ಲಿ ಘಾಜಿಪುರ ಜಿಲ್ಲೆಯಲ್ಲಿ ಗಂಗಾ ನದಿಯಲ್ಲಿ ಹೆಣ್ಣು ಮಗುವೊಂದು ತೇಲಿಬಂದು ನಾವಿಕನ ಕೈಗೆ ಸಿಕ್ಕಿದ ವಿಸ್ಮಯ ಘಟನೆಯೊಂದು ವರದಿಯಾಗಿದೆ.</p>.<p>ಘಾಜಿಪುರ ಜಿಲ್ಲೆಯಲ್ಲಿ ದೋಣಿ ನಡೆಸುತ್ತಿದ್ದ ನಾವಿಕ ಗಂಗಾ ನದಿ ದಡದ ಸಮೀಪ ತೇಲಿಬಂದ ಮರದ ಪೆಟ್ಟಿಗೆಯನ್ನು ಗಮನಿಸಿದ್ದಾನೆ. ಅಳುತ್ತಿರುವ ಮಗುವಿನ ಧ್ವನಿಯೂ ಕೇಳಿಬಂದಾಗ ಕುತೂಹಲದಿಂದ ಮರದ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅಚ್ಚರಿಗೆ ಒಳಗಾಗಿದ್ದಾನೆ.</p>.<p>ಪೆಟ್ಟಿಗೆಯೊಳಗೆ ನವಜಾತ ಹೆಣ್ಣು ಮಗುವನ್ನು ಗಮನಿಸಿ ದೇವರ ಪವಾಡವೆಂದೇ ಗ್ರಹಿಸಿದ್ದಾನೆ. ವಿಚಾರ ತಿಳಿದ ಸುತ್ತಮುತ್ತಲಿನವರು ಆಗಮಿಸಿ ವಿಸ್ಮಯ ಘಟನೆಯನ್ನು ಕಣ್ತುಂಬಿಕೊಂಡಿದ್ದಾರೆ. ಮಗುವಿನ ಅಕ್ಕಪಕ್ಕ ದೇವರ ಫೋಟೊಗಳು, ಜನ್ಮಕುಂಡಲಿ ಮತ್ತು ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ.</p>.<p>ಪೆಟ್ಟಿಗೆಯೊಳಗೆ ಇಡಲಾಗಿರುವ ದೇವರ ಫೋಟೊಗಳು ಮತ್ತು ಸುರಕ್ಷಿತ ವ್ಯವಸ್ಥೆಯನ್ನು ಗಮನಿಸಿದಾಗ ಕೌಟುಂಬಿಕ ಸಂಕಷ್ಟದಿಂದ ಹೆಣ್ಣುಮಗುವನ್ನು ಸಾಕಲು ಸಾಧ್ಯವಾಗದೆ ದೇವರೇ ಸಾಕಿಕೊಳ್ಳುತ್ತಾನೆ ಎಂಬ ಆಶಾವಾದದಲ್ಲಿ ಪೆಟ್ಟಿಗೆಯೊಳಗಿಟ್ಟು ತೆಲಿಬಿಟ್ಟಿರಬಹುದು ಎಂದು ಅಂದಾಜಿಸಲಾಗಿದೆ.</p>.<p>ಆರೋಗ್ಯದಿಂದಿರುವ ಮಗುವನ್ನು ಪೊಲೀಸರು ಆಶಾ ಜ್ಯೋತಿ ಕೇಂದ್ರಕ್ಕೆ ನೀಡಿದ್ದಾರೆ ಎಂದು 'ಎಬಿಪಿಲೈವ್' ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>