<p><strong>ತಿರುವನಂತಪುರ:</strong> ಕೇರಳ ರಾಜ್ಯದಲ್ಲಿ ‘ಲೈಫ್ ಮಿಷನ್’ ಯೋಜನೆಯಡಿ ಬಡವರಿಗೆ ಮನೆ ನಿರ್ಮಿಸಲು ಕೇವಲ ₹4 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಸಚಿವರೊಬ್ಬರ ಕಚೇರಿಯಲ್ಲಿ ಹೊಸ ಶೌಚಾಲಯ ನಿರ್ಮಾಣಕ್ಕಾಗಿ ₹4.10 ಲಕ್ಷ ಮಂಜೂರು ಮಾಡಿರುವುದು ವಿವಾದವನ್ನು ಹುಟ್ಟು ಹಾಕಿದೆ.</p>.<p>ಈ ಕುರಿತಂತೆ ಆಡಳಿತ ಇಲಾಖೆಯಿಂದ ಡಿಸೆಂಬರ್ 21 ರಂದು ಆದೇಶ ಹೊರಬಿದ್ದಿದ್ದು, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.</p>.<p>ಶೌಚಾಲಯಕ್ಕೆ ದುಬಾರಿ ಮೊತ್ತ ಮಂಜೂರು ಮಾಡಿಸಿಕೊಂಡಿರುವ ರಾಜ್ಯದ ಮೀನುಗಾರಿಕಾ ಸಚಿವ ಸಾಜಿ ಚೆರಿಯನ್ ಅವರು ಸಿಪಿಐ-ಎಂನಿಂದ ಎರಡು ಬಾರಿ ಶಾಸಕರಾಗಿದ್ದು, ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಅವಧಿಯ ಸರ್ಕಾರದಲ್ಲಿ ಅಚ್ಚರಿಯ ರೀತಿಯಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಗಿಟ್ಟಿಸಿದ್ದರು. ಅವರಿಗಿಂತ ಹಿರಿಯ ಶಾಸಕರಿದ್ದರೂ ಸಹ ಚೆರಿಯನ್ಗೆ ಸಚಿವ ಸ್ಥಾನ ದಕ್ಕಿತ್ತು.</p>.<p>56 ವರ್ಷದ ಚೆರಿಯನ್ ಅವರು, 2018 ರಲ್ಲಿ ಪಕ್ಷದ ಶಾಸಕರಾಗಿದ್ದ ಕೆ ಕೆ ರಾಮಚಂದ್ರನ್ ನಾಯರ್ ನಿಧನದ ನಂತರ ಆಲಪ್ಪುಳ ಜಿಲ್ಲೆಯ ಚೆಂಗನೂರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.</p>.<p>ಬಳಿಕ, ಈ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಗೆದ್ದು ಕ್ಷೇತ್ರವನ್ನು ಉಳಿಸಿಕೊಂಡಿದ್ದರು.</p>.<p>ಕೇರಳ ರಾಜ್ಯವು ಅತ್ಯಂತ ಕೆಟ್ಟ ಹಣಕಾಸು ಪರಿಸ್ಥಿತಿ ಎದುರಿಸುತ್ತಿರುವ ಈ ಸಂದರ್ಭದಲ್ಲೇ ಚೆರಿಯನ್ ಐಷಾರಾಮಿ ಶೌಚಾಲಯ ನಿರ್ಮಾಣಕ್ಕೆ ದುಂದುವೆಚ್ಚ ಮಾಡುತ್ತಿರುವುದು ಭಾರಿ ಟೀಕೆಗೆ ಕಾರಣವಾಗಿದೆ.</p>.<p>‘ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಹ ಇಂತಹ ದುಂದು ವೆಚ್ಚ ನಡೆಯುತ್ತಿರುತ್ತವೆ. ಎಡಪಕ್ಷಗಳು ಇಂತಹುದರಲ್ಲಿ ತೊಡಗುವುದಿಲ್ಲ ಎಂಬ ನಂಬಿಕೆ ಹುಸಿಯಾಗಿದೆ. ಬೇರೆಯವರಿಗಿಂತ ನಾವು ಭಿನ್ನರಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ’ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಕೇರಳ ರಾಜ್ಯದಲ್ಲಿ ‘ಲೈಫ್ ಮಿಷನ್’ ಯೋಜನೆಯಡಿ ಬಡವರಿಗೆ ಮನೆ ನಿರ್ಮಿಸಲು ಕೇವಲ ₹4 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಸಚಿವರೊಬ್ಬರ ಕಚೇರಿಯಲ್ಲಿ ಹೊಸ ಶೌಚಾಲಯ ನಿರ್ಮಾಣಕ್ಕಾಗಿ ₹4.10 ಲಕ್ಷ ಮಂಜೂರು ಮಾಡಿರುವುದು ವಿವಾದವನ್ನು ಹುಟ್ಟು ಹಾಕಿದೆ.</p>.<p>ಈ ಕುರಿತಂತೆ ಆಡಳಿತ ಇಲಾಖೆಯಿಂದ ಡಿಸೆಂಬರ್ 21 ರಂದು ಆದೇಶ ಹೊರಬಿದ್ದಿದ್ದು, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.</p>.<p>ಶೌಚಾಲಯಕ್ಕೆ ದುಬಾರಿ ಮೊತ್ತ ಮಂಜೂರು ಮಾಡಿಸಿಕೊಂಡಿರುವ ರಾಜ್ಯದ ಮೀನುಗಾರಿಕಾ ಸಚಿವ ಸಾಜಿ ಚೆರಿಯನ್ ಅವರು ಸಿಪಿಐ-ಎಂನಿಂದ ಎರಡು ಬಾರಿ ಶಾಸಕರಾಗಿದ್ದು, ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಅವಧಿಯ ಸರ್ಕಾರದಲ್ಲಿ ಅಚ್ಚರಿಯ ರೀತಿಯಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಗಿಟ್ಟಿಸಿದ್ದರು. ಅವರಿಗಿಂತ ಹಿರಿಯ ಶಾಸಕರಿದ್ದರೂ ಸಹ ಚೆರಿಯನ್ಗೆ ಸಚಿವ ಸ್ಥಾನ ದಕ್ಕಿತ್ತು.</p>.<p>56 ವರ್ಷದ ಚೆರಿಯನ್ ಅವರು, 2018 ರಲ್ಲಿ ಪಕ್ಷದ ಶಾಸಕರಾಗಿದ್ದ ಕೆ ಕೆ ರಾಮಚಂದ್ರನ್ ನಾಯರ್ ನಿಧನದ ನಂತರ ಆಲಪ್ಪುಳ ಜಿಲ್ಲೆಯ ಚೆಂಗನೂರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.</p>.<p>ಬಳಿಕ, ಈ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಗೆದ್ದು ಕ್ಷೇತ್ರವನ್ನು ಉಳಿಸಿಕೊಂಡಿದ್ದರು.</p>.<p>ಕೇರಳ ರಾಜ್ಯವು ಅತ್ಯಂತ ಕೆಟ್ಟ ಹಣಕಾಸು ಪರಿಸ್ಥಿತಿ ಎದುರಿಸುತ್ತಿರುವ ಈ ಸಂದರ್ಭದಲ್ಲೇ ಚೆರಿಯನ್ ಐಷಾರಾಮಿ ಶೌಚಾಲಯ ನಿರ್ಮಾಣಕ್ಕೆ ದುಂದುವೆಚ್ಚ ಮಾಡುತ್ತಿರುವುದು ಭಾರಿ ಟೀಕೆಗೆ ಕಾರಣವಾಗಿದೆ.</p>.<p>‘ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಹ ಇಂತಹ ದುಂದು ವೆಚ್ಚ ನಡೆಯುತ್ತಿರುತ್ತವೆ. ಎಡಪಕ್ಷಗಳು ಇಂತಹುದರಲ್ಲಿ ತೊಡಗುವುದಿಲ್ಲ ಎಂಬ ನಂಬಿಕೆ ಹುಸಿಯಾಗಿದೆ. ಬೇರೆಯವರಿಗಿಂತ ನಾವು ಭಿನ್ನರಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ’ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>