<p class="title"><strong>ಗುವಾಹಟಿ</strong>: ಜುಲೈನಲ್ಲಿ ಈಶಾನ್ಯ ರಾಜ್ಯಗಳ ಗಡಿಯಲ್ಲಿ ನಡೆದ ಮಾರಕ ಘರ್ಷಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಕೇಂದ್ರ ಸರ್ಕಾರ, ಅಸ್ಸಾಂ ಮತ್ತು ಮಿಜೋರಾಂಗೆ ನೋಟಿಸ್ ನೀಡಿದ್ದು, ‘ಮಾನವ ಹಕ್ಕುಗಳ ತೀವ್ರ ಉಲ್ಲಂಘನೆಯಾಗಿದೆ’ ಎಂದು ಸೋಮವಾರ ಆರೋಪಿಸಿದೆ.</p>.<p class="bodytext">ಅಸ್ಸಾಮಿನ ಎಂ.ಡಿ. ಹಿಂಜಾಮುಲ್ ಹಕ್ ಎನ್ನುವವರು ಸಲ್ಲಿಸಿದ ದೂರಿಗೆ ಮೇರೆಗೆ ಎನ್ಎಚ್ಆರ್ಸಿಯು ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಅಸ್ಸಾಂ, ಮಿಜೋರಾಂನ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿದ್ದು, ಈ ಸಂಬಂಧ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ.</p>.<p class="bodytext">‘ಪ್ರಕರಣವನ್ನು ಎನ್ಎಚ್ಆರ್ಸಿಯು ಗಂಭೀರವಾಗಿ ಪರಿಗಣಿಸಿದೆ. ಘರ್ಷಣೆಯಲ್ಲಿ ಪೊಲೀಸರ ಸಾವು–ನೋವುಗಳ ಕುರಿತು ದೂರುದಾರರು ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಸತ್ತವರು ಮತ್ತು ನೋವುಂಡವರ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದನ್ನೂ ಆಯೋಗವು ಪರಿಗಣಿಸಿದೆ’ ಎಂದು ಮೂಲಗಳು ತಿಳಿಸಿವೆ.</p>.<p class="bodytext">ಜುಲೈ 26ರಂದು ಅಸ್ಸಾಂ–ಮಿಜೋರಾಂ ನಡುವಿನ ಗಡಿವಿವಾದವು ಹಿಂಸಾಚಾರಕ್ಕೆ ತಿರುಗಿ, ಘರ್ಷಣೆಯಲ್ಲಿ ಅಸ್ಸಾಂನ ಆರು ಪೊಲೀಸರು ಮತ್ತು ಒಬ್ಬ ನಾಗರಿಕ ಸಾವನ್ನಪಿದ್ದರು. ಅಲ್ಲದೇ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಗುವಾಹಟಿ</strong>: ಜುಲೈನಲ್ಲಿ ಈಶಾನ್ಯ ರಾಜ್ಯಗಳ ಗಡಿಯಲ್ಲಿ ನಡೆದ ಮಾರಕ ಘರ್ಷಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಕೇಂದ್ರ ಸರ್ಕಾರ, ಅಸ್ಸಾಂ ಮತ್ತು ಮಿಜೋರಾಂಗೆ ನೋಟಿಸ್ ನೀಡಿದ್ದು, ‘ಮಾನವ ಹಕ್ಕುಗಳ ತೀವ್ರ ಉಲ್ಲಂಘನೆಯಾಗಿದೆ’ ಎಂದು ಸೋಮವಾರ ಆರೋಪಿಸಿದೆ.</p>.<p class="bodytext">ಅಸ್ಸಾಮಿನ ಎಂ.ಡಿ. ಹಿಂಜಾಮುಲ್ ಹಕ್ ಎನ್ನುವವರು ಸಲ್ಲಿಸಿದ ದೂರಿಗೆ ಮೇರೆಗೆ ಎನ್ಎಚ್ಆರ್ಸಿಯು ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಅಸ್ಸಾಂ, ಮಿಜೋರಾಂನ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿದ್ದು, ಈ ಸಂಬಂಧ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ.</p>.<p class="bodytext">‘ಪ್ರಕರಣವನ್ನು ಎನ್ಎಚ್ಆರ್ಸಿಯು ಗಂಭೀರವಾಗಿ ಪರಿಗಣಿಸಿದೆ. ಘರ್ಷಣೆಯಲ್ಲಿ ಪೊಲೀಸರ ಸಾವು–ನೋವುಗಳ ಕುರಿತು ದೂರುದಾರರು ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಸತ್ತವರು ಮತ್ತು ನೋವುಂಡವರ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದನ್ನೂ ಆಯೋಗವು ಪರಿಗಣಿಸಿದೆ’ ಎಂದು ಮೂಲಗಳು ತಿಳಿಸಿವೆ.</p>.<p class="bodytext">ಜುಲೈ 26ರಂದು ಅಸ್ಸಾಂ–ಮಿಜೋರಾಂ ನಡುವಿನ ಗಡಿವಿವಾದವು ಹಿಂಸಾಚಾರಕ್ಕೆ ತಿರುಗಿ, ಘರ್ಷಣೆಯಲ್ಲಿ ಅಸ್ಸಾಂನ ಆರು ಪೊಲೀಸರು ಮತ್ತು ಒಬ್ಬ ನಾಗರಿಕ ಸಾವನ್ನಪಿದ್ದರು. ಅಲ್ಲದೇ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>