<p class="title"><strong>ಕೋಲ್ಕತ್ತ</strong>: ಪಶ್ಚಿಮ ಬಂಗಾಲದಲ್ಲಿ ಚುನಾವಣೋತ್ತರದಲ್ಲಿ ನಡೆದಿದ್ದ ಹಿಂಸಾಚಾರ, ಅತ್ಯಾಚಾರ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ಶಿಫಾರಸು ಮಾಡಿದೆ.</p>.<p class="title">ಎನ್ಎಚ್ಆರ್ಸಿ ನೇಮಕ ಮಾಡಿದ್ದ ಸಮಿತಿಯು ಈ ಕುರಿತ ವರದಿಯನ್ನು ಕಲ್ಕತ್ತ ಹೈಕೋರ್ಟ್ಗೆ ಜೂನ್ 13ರಂದು ಸಲ್ಲಿಸಿದೆ. ಅಲ್ಲದೆ, ಈ ಪ್ರಕರಣಗಳ ವಿಚಾರಣೆಯನ್ನು ರಾಜ್ಯದ ಹೊರಗಡೆ ನಡೆಸಬೇಕು ಎಂದೂ ಸಲಹೆ ಮಾಡಿದೆ.</p>.<p class="title">ಹೈಕೋರ್ಟ್ನ ಪಂಚ ಸದಸ್ಯರ ಪೀಠದ ನಿರ್ದೇಶನದ ಅನುಸಾರ ಎನ್ಎಚ್ಆರ್ಸಿ ಅಧ್ಯಕ್ಷರು ಸಮಿತಿಯನ್ನು ರಚಿಸಿದ್ದರು. ‘ಪಶ್ಚಿಮ ಬಂಗಾಳದಲ್ಲಿ ಈ ನೆಲದ ಕಾನೂನುಗಳಿಗೆ ಬದಲಾಗಿ, ಅಧಿಕಾರದಲ್ಲಿರುವವರ ಕಾನೂನು ಜಾರಿಯಲ್ಲಿದೆ’ ಎಂದು ಸಮಿತಿ ಹೇಳಿದೆ.</p>.<p>ಸಮಿತಿಯು ತನ್ನ ವರದಿಯಲ್ಲಿ ಕೊಲೆ, ಅತ್ಯಾಚಾರದಂತಹ ಗಂಭೀರ ಪ್ರಕರಣಗಳನ್ನು ಸಿಬಿಐತನಿಖೆಗೆ ಒಪ್ಪಿಸಬೇಕು. ಇವುಗಳ ವಿಚಾರಣೆಯನ್ನು ರಾಜ್ಯದ ಹೊರಗಡೆ ನಡೆಸಬೇಕು ಎಂದು ಪ್ರಮುಖವಾಗಿ ಸಲಹೆ ಮಾಡಿದೆ.</p>.<p>ಹಿಂಸಾಚಾರದ ಘಟನೆಗಳು ಆಡಳಿತ ಪಕ್ಷದ ಬೆಂಬಲಿಗರು ಪ್ರಮುಖ ವಿರೋಧ ಪಕ್ಷದ ಬೆಂಬಲಿಗರ ಮೇಲೆ ನಡೆಸಿದ ಪ್ರತೀಕಾರದ ಕ್ರಮವಾಗಿದೆ ಎಂದು ಸಮಿತಿಯು ತನ್ನ ಅಭಿಪ್ರಾಯವನ್ನು ದಾಖಲಿಸಿದೆ.</p>.<p>ಚುನಾವಣೆಯ ನಂತರ ನಡೆದಿದ್ದ ಹಿಂಸಾಚಾರ ಘಟನೆಗಳ ತನಿಖೆಗೆ ಕೋರಿ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೋರ್ಟ್ಗೆ ಸಲ್ಲಿಕೆಯಾಗಿದ್ದವು.</p>.<p><strong>ರಾಜಕೀಯ ದ್ವೇಷಕ್ಕೆ ಎನ್ಎಚ್ಆರ್ಸಿ ಬಳಕೆ: ಮಮತಾ ಆರೋಪ:</strong>’ಚುನಾವಣೋತ್ತರ ಹಿಂಸಾಚಾರ ಕುರಿತ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವ ಮೂಲಕ ಎನ್ಎಚ್ಆರ್ಸಿ, ಕೋರ್ಟ್ಗೆ ಅಗೌರವ ಸೂಚಿಸಿದೆ‘ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಆರೋಪಿಸಿದರು.</p>.<p>ಬಿಜೆಪಿಯ ‘ರಾಜಕೀಯ ದ್ವೇಷ’ವನ್ನು ಎನ್ಎಚ್ಆರ್ಸಿ ಮುಂದುವರಿಸಿದೆ. ರಾಜ್ಯ ಸರ್ಕಾರದ ಅಭಿಪ್ರಾಯಗಳನ್ನು ಪರಿಗಣಿಸದೇ ಎನ್ಎಚ್ಆರ್ಸಿ ತೀರ್ಮಾನ ಕೈಗೊಂಡಿದೆ ಬಂದಿದೆ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.</p>.<p>ನಿಷ್ಪಕ್ಷವಾತ ಸಂಸ್ಥೆಗಳನ್ನು ಬಿಜೆಪಿಯು ಈತ ತನ್ನ ದ್ವೇಷ ಸಾಧನೆಗೆ ಬಳಸಿಕೊಳ್ಳುತ್ತಿದೆ. ಎನ್ಎಚ್ಆರ್ಸಿ ಮಾಧ್ಯಮಗಳಿಗೆ ಸೋರಿಕೆ ಮಾಡುವ ಬದಲು ವರದಿಯನ್ನು ಕೋರ್ಟ್ಗೆ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಕೋಲ್ಕತ್ತ</strong>: ಪಶ್ಚಿಮ ಬಂಗಾಲದಲ್ಲಿ ಚುನಾವಣೋತ್ತರದಲ್ಲಿ ನಡೆದಿದ್ದ ಹಿಂಸಾಚಾರ, ಅತ್ಯಾಚಾರ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ಶಿಫಾರಸು ಮಾಡಿದೆ.</p>.<p class="title">ಎನ್ಎಚ್ಆರ್ಸಿ ನೇಮಕ ಮಾಡಿದ್ದ ಸಮಿತಿಯು ಈ ಕುರಿತ ವರದಿಯನ್ನು ಕಲ್ಕತ್ತ ಹೈಕೋರ್ಟ್ಗೆ ಜೂನ್ 13ರಂದು ಸಲ್ಲಿಸಿದೆ. ಅಲ್ಲದೆ, ಈ ಪ್ರಕರಣಗಳ ವಿಚಾರಣೆಯನ್ನು ರಾಜ್ಯದ ಹೊರಗಡೆ ನಡೆಸಬೇಕು ಎಂದೂ ಸಲಹೆ ಮಾಡಿದೆ.</p>.<p class="title">ಹೈಕೋರ್ಟ್ನ ಪಂಚ ಸದಸ್ಯರ ಪೀಠದ ನಿರ್ದೇಶನದ ಅನುಸಾರ ಎನ್ಎಚ್ಆರ್ಸಿ ಅಧ್ಯಕ್ಷರು ಸಮಿತಿಯನ್ನು ರಚಿಸಿದ್ದರು. ‘ಪಶ್ಚಿಮ ಬಂಗಾಳದಲ್ಲಿ ಈ ನೆಲದ ಕಾನೂನುಗಳಿಗೆ ಬದಲಾಗಿ, ಅಧಿಕಾರದಲ್ಲಿರುವವರ ಕಾನೂನು ಜಾರಿಯಲ್ಲಿದೆ’ ಎಂದು ಸಮಿತಿ ಹೇಳಿದೆ.</p>.<p>ಸಮಿತಿಯು ತನ್ನ ವರದಿಯಲ್ಲಿ ಕೊಲೆ, ಅತ್ಯಾಚಾರದಂತಹ ಗಂಭೀರ ಪ್ರಕರಣಗಳನ್ನು ಸಿಬಿಐತನಿಖೆಗೆ ಒಪ್ಪಿಸಬೇಕು. ಇವುಗಳ ವಿಚಾರಣೆಯನ್ನು ರಾಜ್ಯದ ಹೊರಗಡೆ ನಡೆಸಬೇಕು ಎಂದು ಪ್ರಮುಖವಾಗಿ ಸಲಹೆ ಮಾಡಿದೆ.</p>.<p>ಹಿಂಸಾಚಾರದ ಘಟನೆಗಳು ಆಡಳಿತ ಪಕ್ಷದ ಬೆಂಬಲಿಗರು ಪ್ರಮುಖ ವಿರೋಧ ಪಕ್ಷದ ಬೆಂಬಲಿಗರ ಮೇಲೆ ನಡೆಸಿದ ಪ್ರತೀಕಾರದ ಕ್ರಮವಾಗಿದೆ ಎಂದು ಸಮಿತಿಯು ತನ್ನ ಅಭಿಪ್ರಾಯವನ್ನು ದಾಖಲಿಸಿದೆ.</p>.<p>ಚುನಾವಣೆಯ ನಂತರ ನಡೆದಿದ್ದ ಹಿಂಸಾಚಾರ ಘಟನೆಗಳ ತನಿಖೆಗೆ ಕೋರಿ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೋರ್ಟ್ಗೆ ಸಲ್ಲಿಕೆಯಾಗಿದ್ದವು.</p>.<p><strong>ರಾಜಕೀಯ ದ್ವೇಷಕ್ಕೆ ಎನ್ಎಚ್ಆರ್ಸಿ ಬಳಕೆ: ಮಮತಾ ಆರೋಪ:</strong>’ಚುನಾವಣೋತ್ತರ ಹಿಂಸಾಚಾರ ಕುರಿತ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವ ಮೂಲಕ ಎನ್ಎಚ್ಆರ್ಸಿ, ಕೋರ್ಟ್ಗೆ ಅಗೌರವ ಸೂಚಿಸಿದೆ‘ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಆರೋಪಿಸಿದರು.</p>.<p>ಬಿಜೆಪಿಯ ‘ರಾಜಕೀಯ ದ್ವೇಷ’ವನ್ನು ಎನ್ಎಚ್ಆರ್ಸಿ ಮುಂದುವರಿಸಿದೆ. ರಾಜ್ಯ ಸರ್ಕಾರದ ಅಭಿಪ್ರಾಯಗಳನ್ನು ಪರಿಗಣಿಸದೇ ಎನ್ಎಚ್ಆರ್ಸಿ ತೀರ್ಮಾನ ಕೈಗೊಂಡಿದೆ ಬಂದಿದೆ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.</p>.<p>ನಿಷ್ಪಕ್ಷವಾತ ಸಂಸ್ಥೆಗಳನ್ನು ಬಿಜೆಪಿಯು ಈತ ತನ್ನ ದ್ವೇಷ ಸಾಧನೆಗೆ ಬಳಸಿಕೊಳ್ಳುತ್ತಿದೆ. ಎನ್ಎಚ್ಆರ್ಸಿ ಮಾಧ್ಯಮಗಳಿಗೆ ಸೋರಿಕೆ ಮಾಡುವ ಬದಲು ವರದಿಯನ್ನು ಕೋರ್ಟ್ಗೆ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>