ಅನೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿದ್ದು, ಲ್ಯಾಪ್ಟಾಪ್ ಅಥವಾ ಸ್ಮಾರ್ಟ್ಫೋನ್ ಖರೀದಿಸಲು ಶಕ್ತರಲ್ಲ. ಎನ್ಐಟಿ ದುರ್ಗಾಪುರ್ ಇಂಥ ಅಗತ್ಯ ವಿದ್ಯಾರ್ಥಿಗಳಿಗೆ ನೆರವಾಗಲು ಸಾಧ್ಯವಾದಷ್ಟು ಕ್ರಮವಹಿಸುತ್ತಿದೆ. ಶಿಕ್ಷಣ ಮುಂದುವರಿಸಲು ನೆರವಾಗುವಂತೆ ಶುಲ್ಕ ಭರಿಸುವ ಕುರಿತೂ ಚಿಂತನೆ ನಡೆದಿದೆ. ಕೋವಿಡ್ ಸ್ಥಿತಿಯಿಂದಾಗಿ ಇದು ಅಗತ್ಯ ಎಂದು ತಿಳಿಸಿದೆ.