‘ನಾನು ಅಲ್ಲಿದ್ದೆ. ಆ ಭಾಷಣವನ್ನು ಕೇಳಿದ್ದ ಎಲ್ಲರೂ ಅಂಥದ್ದೊಂದು ದಿನ ಬರಲಿದೆ ಎಂದೇ ನಂಬಿದ್ದರು. ಅಟಲ್, ಅಡ್ವಾಣಿ, ದೀನದಯಾಳ್ ಉಪಾಧ್ಯಾಯ ಹಾಗೂ ಅನೇಕ ಕಾರ್ಯಕರ್ತರ ಶ್ರಮವೇ ಇಂದು ನಾವು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದಲ್ಲಿ ಹಾಗೂ ಅನೇಕ ರಾಜ್ಯಗಳಲ್ಲಿ ಆಡಳಿತಕ್ಕೆ ಬರಲು ಕಾರಣ’ ಎಂದು ಗಡ್ಕರಿ ಹೇಳಿದ್ದಾರೆ.