ಪಟ್ನಾ: ಬಿಹಾರ ಚುನಾವಣೆ ಪೂರ್ಣಗೊಳ್ಳಲು ಕೆಲವೇ ದಿನಗಳು ಬಾಕಿಯಿದ್ದು, ನಿರುದ್ಯೋಗ ಮತ್ತು ವಲಸೆ ವಿಷಯಗಳ ಕುರಿತು ಮಾತನಾಡುವಂತೆ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಶುಕ್ರವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, 'ಗೌರವಾನ್ವಿತ ನಿತೀಶ್ ಜಿ ಅವರು 15 ವರ್ಷಗಳ ತಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯದ ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕೆಗಳನ್ನು ನಾಶಪಡಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಎರಡು ತಲೆಮಾರುಗಳ ವರ್ತಮಾನ ಮತ್ತು ಭವಿಷ್ಯವನ್ನೂ ಅವರು ಹಾಳುಮಾಡಿದ್ದಾರೆ. ನಿರುದ್ಯೋಗ, ಉದ್ಯೋಗ ಕೈಗಾರಿಕೆಗಳು, ಹೂಡಿಕೆ ಮತ್ತು ವಲಸೆಯ ಬಗ್ಗೆ ಅವರು ಏನನ್ನೂ ಮಾತನಾಡದಿರಲು ಇದುವೇ ಕಾರಣವಾಗಿದೆ. ಈ ವಿಷಯಗಳ ಬಗ್ಗೆ ಅವರು ಮಾತನಾಡಬೇಕಲ್ಲವೇ' ಎಂದಿದ್ದಾರೆ.
आदरणीय नीतीश जी मानते है कि उन्होंने बिहार में 15 वर्ष के शासनकाल में शिक्षा,स्वास्थ्य,उद्योग चौपट करने के साथ-2 दो पीढ़ियों का वर्तमान और भविष्य बर्बाद किया है इसलिए वो बेरोजगारी, नौकरी, कारख़ाने,निवेश और पलायन पर कभी कुछ नहीं बोलते।
— Tejashwi Yadav (@yadavtejashwi) October 30, 2020
क्या उन्हें इन मुद्दों पर नहीं बोलना चाहिए?
ನನ್ನ ಕುಟುಂಬವನ್ನು ಟೀಕಿಸುವ ಮೂಲಕ, ನಿತೀಶ್ ಕುಮಾರ್ ಅವರು, 6 ಜನ ಒಡಹುಟ್ಟಿದವರನ್ನು ಹೊಂದಿರುವ ಪ್ರಧಾನಿ ಮೋದಿಯವರ ವಿಚಾರ ಪ್ರಸ್ತಾಪಿಸಿದ್ದಾರೆ. ಅಂತಹ ಭಾಷೆಯನ್ನು ಬಳಸುವ ಮೂಲಕ ನಿತೀಶ್ ಕುಮಾರ್, ಮಹಿಳೆಯರು ಮತ್ತು ನನ್ನ ತಾಯಿಯ ಭಾವನೆಗಳನ್ನು ಅವಮಾನಿಸಿದ್ದಾರೆ. ಹಣದುಬ್ಬರ, ಭ್ರಷ್ಟಾಚಾರ, ನಿರುದ್ಯೋಗ ಇತ್ಯಾದಿ ಮುಖ್ಯ ವಿಷಯಗಳ ಬಗ್ಗೆ ಅವರು ಮಾತನಾಡುವುದಿಲ್ಲ, ಬದಲಿಗೆ ಅವರು ನಮ್ಮನ್ನು ನಿಂದಿಸುತ್ತಾರೆ' ಎಂದು ಹೇಳಿದ್ದಾರೆ.
'ಸಿಎಂ ನಿತೀಶ್ ಕುಮಾರ್ ನಮ್ಮ ವಿರುದ್ಧ ಏನೇ ಹೇಳಿದರೂ ಅದು ನಮಗೆ ಆಶೀರ್ವಾದ ಎಂದುಕೊಳ್ಳುವೆ. ಆದರೆ, ಅವರು ನಮ್ಮನ್ನು ನಿಂದಿಸುವ ಮೂಲಕ ಪರೋಕ್ಷವಾಗಿ ಪ್ರಧಾನಿ ಮೋದಿ ಅವರನ್ನು ಹೊಗಳಲು ಪ್ರಯತ್ನಿಸುತ್ತಿದ್ದಾರೆ' ಎಂದು ಹೇಳಿದರು.
'ಯುವಜನರಿಗೆ ಉದ್ಯೋಗ ಒದಗಿಸುವುದು, ಬಡತನವನ್ನು ನಿರ್ಮೂಲನೆ ಮಾಡುವುದು, ಕಾರ್ಖಾನೆಗಳನ್ನು ತೆರೆಯುವುದು ಮತ್ತು ಆಹಾರ ಸಂಸ್ಕರಣಾ ಘಟಕಗಳನ್ನು ನಿರ್ಮಿಸುವುದು ಆರ್ಜೆಡಿಯ ಏಕೈಕ ಗಮನವಾಗಿದೆ. ಬಿಹಾರದ ಜನರು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಮತ ಚಲಾಯಿಸಲು ನಿರ್ಧರಿಸಿದ್ದಾರೆ' ಎಂದು ಯಾದವ್ ಹೇಳಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದೆ. ಅಕ್ಟೋಬರ್ 28ರಂದು ಮೊದಲ ಹಂತದ ಮತದಾನ ನಡೆದಿದ್ದು, ನವೆಂಬರ್ 3, ನವೆಂಬರ್ 7 ರಂದು ಎರಡು ಮತ್ತು ಮೂರನೇ ಹಂತದ ಚುನಾವಣೆ ನಡೆಯಲಿದೆ. ನ.10ರಂದು ಫಲಿತಾಂಶ ಪ್ರಕಟವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.