ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

Last Updated 10 ಮಾರ್ಚ್ 2021, 8:25 IST
ಅಕ್ಷರ ಗಾತ್ರ

ಚಂಡಿಗಡ: ಹರಿಯಾಣದ ಎಂ.ಎಲ್‌.ಖಟ್ಟರ್‌ ನೇತೃತ್ವದ ಬಿಜೆಪಿ–ಜೆಜೆಪಿ ಮೈತ್ರಿಕೂಟ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ ಬುಧವಾರ ಅವಿಶ್ವಾಸ ನಿರ್ಣಯ ಮಂಡಿಸಿದೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿ‌ ಮುಗಿದ ನಂತರ ಸ್ಪೀಕರ್ ಗ್ಯಾನ್‌ಚಂದ್‌ ಗುಪ್ತಾಅವರು ವಿರೋಧ ಪಕ್ಷದ ನಾಯಕ ಭೂಪಿಂದರ್‌ ಸಿಂಗ್ ಹೂಡಾ ಮಂಡಿಸಿದಅವಿಶ್ವಾಸ ನಿರ್ಣಯವನ್ನು ಸ್ವೀಕರಿಸಿದರು.

‘ನಾನು ವಿರೋಧ ಪಕ್ಷದ ನಾಯಕರು ಮತ್ತು ಇತರ 27 ಕಾಂಗ್ರೆಸ್ ಶಾಸಕರು ಮಂಡಿಸಿರುವ ಅವಿಶ್ವಾಸ ನಿರ್ಣಯವನ್ನು ಸ್ವೀಕರಿಸಿದ್ದೇನೆ‘ ಎಂದು ಸ್ಪೀಕರ್ ಹೇಳಿದರು. ಅವಿಶ್ವಾಸ ನಿರ್ಣಯದ ಮೇಲೆ ಎರಡು ಗಂಟೆಗಳ ಚರ್ಚೆಗೆ ಅವರು ಅವಕಾಶ ನೀಡಿದರು.

90 ಸದಸ್ಯ ಬಲದ ವಿಧಾನಸಭೆಯಲ್ಲಿ ಪ್ರಸ್ತುತ 88 ಸದಸ್ಯರಿದ್ದಾರೆ.ಇದರಲ್ಲಿ ಆಡಳಿತಾರೂಢ ಬಿಜೆಪಿಯ 40 ಸದಸ್ಯರು, ಜೆಜೆಪಿ 10 ಮತ್ತು ಕಾಂಗ್ರೆಸ್‌ನ 30 ಸದಸ್ಯರು ಸೇರಿದ್ದಾರೆ. ಏಳು ಮಂದಿ ಪಕ್ಷೇತರ ಶಾಸಕರಿದ್ದು,ಐವರು ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ. ಹರಿಯಾಣ ಲೋಖಿತ್ ಪಕ್ಷದ ಒಬ್ಬ ಸದಸ್ಯರೂ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT