<p class="title"><strong>ಭೋಪಾಲ್(ಪಿಟಿಐ):</strong> ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದ ಹತಾಶೆಗೊಂಡ, ನಿರಾಶವಾದಿ,ವಿಫಲ ಹಾಗೂ ಭರವಸೆಯೇ ಇಲ್ಲದ ನಾಯಕ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದ್ದಾರೆ.</p>.<p class="title">ರಾಹುಲ್ ಗಾಂಧಿ ಅವರ ಮಾತನ್ನು ದೇಶದಲ್ಲಿ ಯಾರೂ ಕೇಳಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವರು ತಮ್ಮಹತಾಶೆಯನ್ನು ವಿದೇಶದಲ್ಲಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.</p>.<p>ಲಂಡನ್ ಸಮಾವೇಶದಲ್ಲಿ ರಾಹುಲ್ ಅವರು, ‘ದೇಶದಾದ್ಯಂತ ಬಿಜೆಪಿಯು ಸೀಮೆಎಣ್ಣೆ ಪಸರಿಸುತ್ತಿದೆ. ಒಂದು ಸಣ್ಣ ಕಿಡಿಯಷ್ಟೇ ಸಾಕು ಮತ್ತು ನಾವು ಅತಿದೊಡ್ಡ ಸಂಕಷ್ಟ ಸ್ಥಿತಿಯಲ್ಲಿದ್ದೇವೆ’ ಎಂದು ಹೇಳಿರುವುದಕ್ಕೆ ಶಿವರಾಜ್ ಸಿಂಗ್ ಅವರು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ರಾಹುಲ್ ಅವರು ಯಶಸ್ವಿಯಾಗದ, ನಿರಾಶವಾದಿ ನಾಯಕ. ದೇಶಭಕ್ತ ನಾಯಕರು ಯಾರೂ ಸಹ ವಿದೇಶದ ನೆಲದಲ್ಲಿ ರಾಹುಲ್ ರೀತಿ ದೇಶ ವಿರೋಧಿ ಹೇಳಿಕೆಗಳನ್ನು ನೀಡುವುದಿಲ್ಲ. ದೇಶದಲ್ಲಿ ಅವರ ಮಾತನ್ನು ಯಾರೂ ಕೇಳುವುದಿಲ್ಲ. ಹೀಗಾಗಿ ಅವರು ತಮ್ಮ ಹತಾಶೆಯನ್ನು ವಿದೇಶದಲ್ಲಿ ತೋರಿಕೊಳ್ಳುತ್ತಿದ್ದಾರೆ.</p>.<p>ನಾವು ಎಂದಿಗೂ ಹೊರ ದೇಶದಲ್ಲಿ ದೇಶವನ್ನು ಟೀಕೆ ಮಾಡಿಲ್ಲ. ಆದರೆ, ಹತಾಶೆಯ ವ್ಯಕ್ತಿಯಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರನ್ನಾಗಿ ಮಾಡಲು ಪ್ರಚಾರ ನಡೆಸುತ್ತಿದ್ದಾರೆ. ಇಂಥ ಪಕ್ಷವನ್ನು ದೇವರೇ ಕಾಪಾಡಬೇಕು’ ಎಂದು ವ್ಯಂಗ್ಯವಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಭೋಪಾಲ್(ಪಿಟಿಐ):</strong> ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದ ಹತಾಶೆಗೊಂಡ, ನಿರಾಶವಾದಿ,ವಿಫಲ ಹಾಗೂ ಭರವಸೆಯೇ ಇಲ್ಲದ ನಾಯಕ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದ್ದಾರೆ.</p>.<p class="title">ರಾಹುಲ್ ಗಾಂಧಿ ಅವರ ಮಾತನ್ನು ದೇಶದಲ್ಲಿ ಯಾರೂ ಕೇಳಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವರು ತಮ್ಮಹತಾಶೆಯನ್ನು ವಿದೇಶದಲ್ಲಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.</p>.<p>ಲಂಡನ್ ಸಮಾವೇಶದಲ್ಲಿ ರಾಹುಲ್ ಅವರು, ‘ದೇಶದಾದ್ಯಂತ ಬಿಜೆಪಿಯು ಸೀಮೆಎಣ್ಣೆ ಪಸರಿಸುತ್ತಿದೆ. ಒಂದು ಸಣ್ಣ ಕಿಡಿಯಷ್ಟೇ ಸಾಕು ಮತ್ತು ನಾವು ಅತಿದೊಡ್ಡ ಸಂಕಷ್ಟ ಸ್ಥಿತಿಯಲ್ಲಿದ್ದೇವೆ’ ಎಂದು ಹೇಳಿರುವುದಕ್ಕೆ ಶಿವರಾಜ್ ಸಿಂಗ್ ಅವರು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ರಾಹುಲ್ ಅವರು ಯಶಸ್ವಿಯಾಗದ, ನಿರಾಶವಾದಿ ನಾಯಕ. ದೇಶಭಕ್ತ ನಾಯಕರು ಯಾರೂ ಸಹ ವಿದೇಶದ ನೆಲದಲ್ಲಿ ರಾಹುಲ್ ರೀತಿ ದೇಶ ವಿರೋಧಿ ಹೇಳಿಕೆಗಳನ್ನು ನೀಡುವುದಿಲ್ಲ. ದೇಶದಲ್ಲಿ ಅವರ ಮಾತನ್ನು ಯಾರೂ ಕೇಳುವುದಿಲ್ಲ. ಹೀಗಾಗಿ ಅವರು ತಮ್ಮ ಹತಾಶೆಯನ್ನು ವಿದೇಶದಲ್ಲಿ ತೋರಿಕೊಳ್ಳುತ್ತಿದ್ದಾರೆ.</p>.<p>ನಾವು ಎಂದಿಗೂ ಹೊರ ದೇಶದಲ್ಲಿ ದೇಶವನ್ನು ಟೀಕೆ ಮಾಡಿಲ್ಲ. ಆದರೆ, ಹತಾಶೆಯ ವ್ಯಕ್ತಿಯಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರನ್ನಾಗಿ ಮಾಡಲು ಪ್ರಚಾರ ನಡೆಸುತ್ತಿದ್ದಾರೆ. ಇಂಥ ಪಕ್ಷವನ್ನು ದೇವರೇ ಕಾಪಾಡಬೇಕು’ ಎಂದು ವ್ಯಂಗ್ಯವಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>