<p><strong>ಪಟಣ:</strong> ಬಿಹಾರದ ಮುಜಪ್ಫರಪುರದ 65 ವರ್ಷದ ಮಹಿಳೆ 13 ತಿಂಗಳಲ್ಲಿ 8 ಮಕ್ಕಳಿಗೆ ಜನ್ಮ ನೀಡಿ, ಪ್ರತಿ ಹೆರಿಗೆಯ ನಂತರ ₹1,400 ಸರ್ಕಾರದ ನೆರವಿನ ಫಲಾನುಭವ ಪಡೆದುಕೊಂಡಿದ್ದಾರೆ!</p>.<p>ಹೀಗೆ ಕಳ್ಳಲೆಕ್ಕ ನೀಡಿ ಹಣ ಲೂಟಿ ಮಾಡಿರುವುದು ಬಿಹಾರದ ಹಗರಣವೊಂದರಲ್ಲಿ ಬಯಲಾಗಿದೆ.</p>.<p>ರಾಷ್ಟ್ರೀಯ ಗ್ರಾಮ ಸ್ವಾಸ್ಥ್ಯ ಯೋಜನೆಯಲ್ಲಿ ಮಹಿಳೆಯ ಹೆಸರಿನಲ್ಲಿ ಹಣ ಲೂಟಿ ಮಾಡಲಾಗಿದೆ. ಅನುಮಾನಾಸ್ಪದವಾಗಿ ಕಂಡು ಬಂದಿರು ಪ್ರಕರಣಗಳಲ್ಲಿ ಮಹಿಳೆಯರನ್ನು ಪತ್ತೆ ಮಾಡಲಾಗಿದ್ದು, ಆಘಾತಕಾರಿ ಸಂಗತಿಗಳು ಬಯಲಾಗಿವೆ. 13 ತಿಂಗಳಲ್ಲಿ 8 ಮಕ್ಕಳಿಗೆ ಜನ್ಮ ನೀಡಿದರು ಎನ್ನಲಾದ ನಿರ್ದಿಷ್ಟ ಮಹಿಳೆಯನ್ನು ಮುಜಪ್ಫರಪುರದಲ್ಲಿ ಪತ್ತೆ ಮಾಡಲಾಗಿದೆ. ಆದರೆ, ಶಾಂತಿ ದೇವಿ ಎಂಬ ಆ ಮಹಿಳೆಯು ದಾಖಲೆಗಳಲ್ಲಿ ನಮೂದಿಸಿರುವ ಅವಧಿಯಲ್ಲಿ ಯಾವುದೇ ಮಗುವಿಗೆ ಜನ್ಮ ನೀಡೇ ಇಲ್ಲ.</p>.<p>‘ಶಾಂತಿ ದೇವಿ ಕಳೆದ 20 ವರ್ಷಗಳಲ್ಲಿ ಯಾವುದೇ ಮಗು ಹಡೆದಿಲ್ಲ. ಅವರ ಕಿರಿಯ ಮಗನಿಗೆ 20 ವರ್ಷ’ ಎಂದು ಆಕೆಯ ಸಂಬಂಧಿಯೊಬ್ಬರು ಸ್ಥಳೀಯ ಪ್ರಮುಖ ದಿನಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.</p>.<p>ಕೌತುಕದ ಸಂಗತಿ ಏನೆಂದರೆ, ಮುಜಪ್ಫರಪುರದ ಮುಷಾರಿ ಬ್ಲಾಕ್ನಲ್ಲಿ ನೆಲೆಸಿರುವ ವೃದ್ಧೆಗೆ ಜುಲೈ–2019 ಮತ್ತು ಆಗಸ್ಟ್–2020ರ ನಡುವೆ ರಾಷ್ಟ್ರೀಯ ಗ್ರಾಮ ಸ್ವಸ್ಥ್ಯ ಯೋಜನೆಯಡಿ ಎಂಟು ಬಾರಿ ₹1,400 ತಮ್ಮ ಖಾತೆಗೆ ಹಣ ಬಂದಿರುವುದೇ ಗೊತ್ತಿಲ್ಲ. ಪ್ರತಿ ಬಾರಿ ಜಮೆಯಾಗಿರುವ ಸರ್ಕಾರದ ಹಣವನ್ನು ಯಾರೋ ಮರುದಿನವೇ ಡ್ರಾ ಮಾಡಿದ್ದಾರೆ. ಈ ವ್ಯತ್ಯಾಸಗಳ ಬಗ್ಗೆ ಶಾಂತಿ ದೇವಿ ಅವರ ಕುಟುಂಬವು ಬ್ಯಾಂಕ್ಗೆ ಮಾಹಿತಿ ನೀಡಿದೆ. ಆತಂಕಕಾರಿ ಸಂಗತಿ ಎಂದರೆ, ಈ ಕಳ್ಳಲೆಕ್ಕ ಶಾಂತಿದೇವಿ ಅವರೊಬ್ಬರ ವಿಚಾರದಲ್ಲಿ ನಡೆದಿರುವುದಲ್ಲ. ಇದರ ಆಳ ಅಗಲ ವಿಸ್ತಾರವಾಗಿರುವುದು ಗೊತ್ತಾಗಿದೆ.</p>.<p>ಶಾಂತಿ ದೇವಿ ಅವರು ವಾಸವಾಗಿರುವ ಬ್ಲಾಕ್ನಲ್ಲೇ ನೆಲೆಸಿರುವ ಲೀಲಾ ದೇವಿ ಕೂಡ ಕಳೆದ 13 ತಿಂಗಳಲ್ಲಿ ಎಂಟು ಬಾರಿ ಶಿಶುಗಳನ್ನು ಹೆರಿಗೆ ಮಾಡಿರುವುದಾಗಿ ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ವಾಸ್ತವದಲ್ಲಿ, ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆಕೆ ಈ ಹತ್ತು ವರ್ಷಗಳಲ್ಲಿ ಮಕ್ಕಳನ್ನೇ ಹಡೆದಿಲ್ಲ. ಆಕೆಯ ಪ್ರಕರಣದಲ್ಲಿ ಮತ್ತೊಂದು ಕೌತುಕವಿದೆ. ಲೀಲಾ ದೇವಿ ಒಂದೇ ದಿನದಲ್ಲಿ ಎರಡು ಬಾರಿ ಶಿಶುಗಳನ್ನು ಹೆತ್ತಿರುವುದಾಗಿ ದಾಖಲೆಗಳನ್ನು ತಯಾರಿಸಿ ಹಣ ಹೊಡೆಯಲಾಗಿದೆ. ಶಾಂತಿ ದೇವಿ ಅವರ ಪ್ರಕರಣದಂತೆಯೇ ಇವರ ಖಾತೆಗೂ 8 ಬಾರಿ ಹಣ ಸಂದಾಯವಾಗಿದ್ದು, ಮರುದಿನ ಯಾರೋ ಡ್ರಾ ಮಾಡಿಕೊಂಡಿದ್ದಾರೆ.</p>.<p>ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ಶಸ್ತ್ರಚಿಕಿತ್ಸಕ ಡಾ ಎಸ್ಪಿ ಸಿಂಗ್ ಭರವಸೆ ನೀಡಿದ್ದಾರೆ. ‘ಪ್ರಕರಣದ ಅಮೂಲಾಗ್ರ ನಡೆಸುತ್ತೇವೆ. ಅಪರಾಧಿಗಳಿಗೆ ಶಿಕ್ಷೆ ಕೊಡಿಸುತ್ತೇವೆ,’ ಎಂದು ಸಿಂಗ್ ಹೇಳಿದ್ದಾರೆ.</p>.<p>‘ಹಗರಣದ ತನಿಖೆ ನಡೆಸಲು ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ’ ಎಂದು ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಗುರುವಾರ ಇಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟಣ:</strong> ಬಿಹಾರದ ಮುಜಪ್ಫರಪುರದ 65 ವರ್ಷದ ಮಹಿಳೆ 13 ತಿಂಗಳಲ್ಲಿ 8 ಮಕ್ಕಳಿಗೆ ಜನ್ಮ ನೀಡಿ, ಪ್ರತಿ ಹೆರಿಗೆಯ ನಂತರ ₹1,400 ಸರ್ಕಾರದ ನೆರವಿನ ಫಲಾನುಭವ ಪಡೆದುಕೊಂಡಿದ್ದಾರೆ!</p>.<p>ಹೀಗೆ ಕಳ್ಳಲೆಕ್ಕ ನೀಡಿ ಹಣ ಲೂಟಿ ಮಾಡಿರುವುದು ಬಿಹಾರದ ಹಗರಣವೊಂದರಲ್ಲಿ ಬಯಲಾಗಿದೆ.</p>.<p>ರಾಷ್ಟ್ರೀಯ ಗ್ರಾಮ ಸ್ವಾಸ್ಥ್ಯ ಯೋಜನೆಯಲ್ಲಿ ಮಹಿಳೆಯ ಹೆಸರಿನಲ್ಲಿ ಹಣ ಲೂಟಿ ಮಾಡಲಾಗಿದೆ. ಅನುಮಾನಾಸ್ಪದವಾಗಿ ಕಂಡು ಬಂದಿರು ಪ್ರಕರಣಗಳಲ್ಲಿ ಮಹಿಳೆಯರನ್ನು ಪತ್ತೆ ಮಾಡಲಾಗಿದ್ದು, ಆಘಾತಕಾರಿ ಸಂಗತಿಗಳು ಬಯಲಾಗಿವೆ. 13 ತಿಂಗಳಲ್ಲಿ 8 ಮಕ್ಕಳಿಗೆ ಜನ್ಮ ನೀಡಿದರು ಎನ್ನಲಾದ ನಿರ್ದಿಷ್ಟ ಮಹಿಳೆಯನ್ನು ಮುಜಪ್ಫರಪುರದಲ್ಲಿ ಪತ್ತೆ ಮಾಡಲಾಗಿದೆ. ಆದರೆ, ಶಾಂತಿ ದೇವಿ ಎಂಬ ಆ ಮಹಿಳೆಯು ದಾಖಲೆಗಳಲ್ಲಿ ನಮೂದಿಸಿರುವ ಅವಧಿಯಲ್ಲಿ ಯಾವುದೇ ಮಗುವಿಗೆ ಜನ್ಮ ನೀಡೇ ಇಲ್ಲ.</p>.<p>‘ಶಾಂತಿ ದೇವಿ ಕಳೆದ 20 ವರ್ಷಗಳಲ್ಲಿ ಯಾವುದೇ ಮಗು ಹಡೆದಿಲ್ಲ. ಅವರ ಕಿರಿಯ ಮಗನಿಗೆ 20 ವರ್ಷ’ ಎಂದು ಆಕೆಯ ಸಂಬಂಧಿಯೊಬ್ಬರು ಸ್ಥಳೀಯ ಪ್ರಮುಖ ದಿನಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.</p>.<p>ಕೌತುಕದ ಸಂಗತಿ ಏನೆಂದರೆ, ಮುಜಪ್ಫರಪುರದ ಮುಷಾರಿ ಬ್ಲಾಕ್ನಲ್ಲಿ ನೆಲೆಸಿರುವ ವೃದ್ಧೆಗೆ ಜುಲೈ–2019 ಮತ್ತು ಆಗಸ್ಟ್–2020ರ ನಡುವೆ ರಾಷ್ಟ್ರೀಯ ಗ್ರಾಮ ಸ್ವಸ್ಥ್ಯ ಯೋಜನೆಯಡಿ ಎಂಟು ಬಾರಿ ₹1,400 ತಮ್ಮ ಖಾತೆಗೆ ಹಣ ಬಂದಿರುವುದೇ ಗೊತ್ತಿಲ್ಲ. ಪ್ರತಿ ಬಾರಿ ಜಮೆಯಾಗಿರುವ ಸರ್ಕಾರದ ಹಣವನ್ನು ಯಾರೋ ಮರುದಿನವೇ ಡ್ರಾ ಮಾಡಿದ್ದಾರೆ. ಈ ವ್ಯತ್ಯಾಸಗಳ ಬಗ್ಗೆ ಶಾಂತಿ ದೇವಿ ಅವರ ಕುಟುಂಬವು ಬ್ಯಾಂಕ್ಗೆ ಮಾಹಿತಿ ನೀಡಿದೆ. ಆತಂಕಕಾರಿ ಸಂಗತಿ ಎಂದರೆ, ಈ ಕಳ್ಳಲೆಕ್ಕ ಶಾಂತಿದೇವಿ ಅವರೊಬ್ಬರ ವಿಚಾರದಲ್ಲಿ ನಡೆದಿರುವುದಲ್ಲ. ಇದರ ಆಳ ಅಗಲ ವಿಸ್ತಾರವಾಗಿರುವುದು ಗೊತ್ತಾಗಿದೆ.</p>.<p>ಶಾಂತಿ ದೇವಿ ಅವರು ವಾಸವಾಗಿರುವ ಬ್ಲಾಕ್ನಲ್ಲೇ ನೆಲೆಸಿರುವ ಲೀಲಾ ದೇವಿ ಕೂಡ ಕಳೆದ 13 ತಿಂಗಳಲ್ಲಿ ಎಂಟು ಬಾರಿ ಶಿಶುಗಳನ್ನು ಹೆರಿಗೆ ಮಾಡಿರುವುದಾಗಿ ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ವಾಸ್ತವದಲ್ಲಿ, ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆಕೆ ಈ ಹತ್ತು ವರ್ಷಗಳಲ್ಲಿ ಮಕ್ಕಳನ್ನೇ ಹಡೆದಿಲ್ಲ. ಆಕೆಯ ಪ್ರಕರಣದಲ್ಲಿ ಮತ್ತೊಂದು ಕೌತುಕವಿದೆ. ಲೀಲಾ ದೇವಿ ಒಂದೇ ದಿನದಲ್ಲಿ ಎರಡು ಬಾರಿ ಶಿಶುಗಳನ್ನು ಹೆತ್ತಿರುವುದಾಗಿ ದಾಖಲೆಗಳನ್ನು ತಯಾರಿಸಿ ಹಣ ಹೊಡೆಯಲಾಗಿದೆ. ಶಾಂತಿ ದೇವಿ ಅವರ ಪ್ರಕರಣದಂತೆಯೇ ಇವರ ಖಾತೆಗೂ 8 ಬಾರಿ ಹಣ ಸಂದಾಯವಾಗಿದ್ದು, ಮರುದಿನ ಯಾರೋ ಡ್ರಾ ಮಾಡಿಕೊಂಡಿದ್ದಾರೆ.</p>.<p>ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ಶಸ್ತ್ರಚಿಕಿತ್ಸಕ ಡಾ ಎಸ್ಪಿ ಸಿಂಗ್ ಭರವಸೆ ನೀಡಿದ್ದಾರೆ. ‘ಪ್ರಕರಣದ ಅಮೂಲಾಗ್ರ ನಡೆಸುತ್ತೇವೆ. ಅಪರಾಧಿಗಳಿಗೆ ಶಿಕ್ಷೆ ಕೊಡಿಸುತ್ತೇವೆ,’ ಎಂದು ಸಿಂಗ್ ಹೇಳಿದ್ದಾರೆ.</p>.<p>‘ಹಗರಣದ ತನಿಖೆ ನಡೆಸಲು ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ’ ಎಂದು ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಗುರುವಾರ ಇಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>