ಗುವಾಹಟಿ: ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಅಸ್ಸಾಂನಲ್ಲಿ ಕೇವಲ ಒಂದೇ ಒಂದು ಸಕ್ರಿಯ ಪ್ರಕರಣವ ದಾಖಲಾಗಿದೆ ಎಂದು ಎನ್ಎಚ್ಎಂ ನಿರ್ದೇಶಕ ಮನೋಜ್ ಚೌಧರಿ ಹೇಳಿದ್ದಾರೆ.
‘ಈಗ ನಮ್ಮಲ್ಲಿ ಮಾರ್ಚ್ 18 ರಂದು ಕೇವಲ ಒಂದು ಸಕ್ರಿಯ ಕೋವಿಡ್ -19 ಪ್ರಕರಣವು ಪತ್ತೆಯಾಗಿದೆ. ಈ ಪ್ರಕರಣದ ಮೇಲೆ ತೀವ್ರ ನಿಗಾ ಇರಿಸಿದ್ದೇವೆ’ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ನಿರ್ದೇಶಕ ಮನೋಜ್ ಚೌಧರಿ ಐಎಎನ್ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ರಾಜ್ಯಾದ್ಯಂತ ಕೋವಿಡ್–19 ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಲ್ಲಿ ಕಡ್ಡಾಯ ಪರೀಕ್ಷೆಯನ್ನು ನಿಲ್ಲಿಸಲಾಗಿದ್ದರೂ, ರೋಗಲಕ್ಷಣ ಕಂಡು ಬಂದ ರೋಗಿಗಳಿಗೆ ಪರೀಕ್ಷೆಗಳಿಗೆ ಒಳಗಾಗಲು ತಿಳಿಸಲಾಗಿದೆ. ಇನ್ಫ್ಲುಯೆನ್ಸ ವೈರಸ್ ರೀತಿಯ ಲಕ್ಷಣಗಳನ್ನು ಹೊಂದಿರುವ ರೋಗಿಗಳು ಮಾತ್ರ ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ಮನೋಜ್ ಹೇಳಿದ್ದಾರೆ.
ಕೋವಿಡ್–19 ತಡೆಗಟ್ಟುವ ಮಾರ್ಗ ಸೂಚಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮನೋಜ್ ಚೌಧರಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.