2016ರಲ್ಲಿ ಜಯಲಲಿತಾ ಅವರು ಸರ್ಕಾರ ರಚಿಸಿದಾಗ, ಪಳನಿಸ್ವಾಮಿ ಅಂದಿನ ಸಂಪುಟದ ನಾಲ್ಕನೇ ಸ್ಥಾನದಲ್ಲಿದ್ದರು. ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಪನ್ನೀರಸೆಲ್ವಂ ಅವರು, ಶಶಿಕಲಾ ಅವರ ವಿರುದ್ಧ ಬಂಡಾಯ ಎದ್ದಿದ್ದರು. ಪನ್ನೀರಸೆಲ್ವಂ ಅವರನ್ನು ಮೂಲೆಗುಂಪು ಮಾಡಲು ಶಶಿಕಲಾ ಅವರು, ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿದರು. ಬಹುಶಃ ಶಶಿಕಲಾ ಅವರು ತಮ್ಮ ಆ ನಿರ್ಧಾರದ ಬಗ್ಗೆ ಈಗ ಪರಿತಪಿಸುತ್ತಿರಬಹುದು.