ರಾಂಚಿ: ಟಾಟಾನಗರದಿಂದ ದ್ರವೀಕೃತ ಆಮ್ಲಜನಕ ಕಂಟೇನರ್ಗಳನ್ನು ಹೊತ್ತ ‘ಆಕ್ಸಿಜನ್ ಎಕ್ಸ್ಪ್ರೆಸ್’ ರೈಲು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ ಎಂದು ರೈಲ್ವೆ ಸಚಿವ ಪಿಯೂಷ್ಗೋಯಲ್ ಟ್ವೀಟ್ ಮಾಡಿದ್ದಾರೆ.
ರಾಜ್ಯಕ್ಕೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ‘ಆಕ್ಸಿಜನ್ ಎಕ್ಸ್ಪ್ರೆಸ್’ ರೈಲಿನ ಮೂಲಕ ಆಮ್ಲಜನಕವನ್ನು ಪೂರೈಕೆ ಮಾಡುತ್ತಿದೆ. ಒಟ್ಟು 6 ಕಂಟೇನರ್ಗಳಲ್ಲಿ ಆಮ್ಲಜನಕ ರಾಜ್ಯಕ್ಕೆ ಬರುತ್ತಿದೆ.
ಇದರಿಂದ ರಾಜ್ಯದಲ್ಲಿನ ಕೋವಿಡ್ ಪೀಡಿತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪಿಯೂಷ್ಗೊಯಲ್ ಟ್ವೀಟ್ ಮಾಡಿದ್ದಾರೆ.
#OxygenExpress is on its way from Tatanagar to Bengaluru with 6 containers of medical Oxygen.
The first Oxygen Express train to Karnataka will deliver oxygen for bringing relief to COVID-19 patients in the State. pic.twitter.com/bf64L3jSFx