<p><strong>ಮುಂಬೈ:</strong> ಮಹಾರಾಷ್ಟ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿರುವ ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬಿರ್ ಸಿಂಗ್ ಅವರು, ಕೇಂದ್ರದ ತನಿಖಾ ಸಂಸ್ಥೆಗಳ ಒತ್ತಡದಲ್ಲಿರಬಹುದು ಎಂದು ಭಾನುವಾರ ಹೇಳಿದೆ.</p>.<p>ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್, ಭಾರತದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಯೊಬ್ಬರು ಅಧಿಕಾರದಲ್ಲಿರುವವರ ವಿರುದ್ಧ ಆರೋಪಗಳನ್ನು ಮಾಡುತ್ತಿರುವುದು ಇದೇ ಮೊದಲೇನಲ್ಲ ಎಂದಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/param-birs-letter-waze-case-tainted-mvas-image-allies-need-to-introspect-raut-815233.html" itemprop="url">ಮಹಾರಾಷ್ಟ್ರ ಗೃಹ ಸಚಿವರ ವಿರುದ್ಧ ಆರೋಪ: ಎಂವಿಎ ಸರ್ಕಾರದ ವರ್ಚಸ್ಸಿಗೆ ಧಕ್ಕೆ </a></p>.<p>ಮುಂಬೈ ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾಯಿಸಿದ ನಂತರ, ಪರಮ್ ಬೀರ್ ಸಿಂಗ್ ಅವರು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಎನ್ಸಿಪಿ ಹಿರಿಯ ಮುಖಂಡ ದೇಶಮುಖ್, ಮುಂಬೈನ ಬಾರ್ ಮತ್ತು ಹೋಟೆಲ್ಗಳಿಂದ ಮಾಸಿಕ 100 ಕೋಟಿ ರೂ. ಸಂಗ್ರಹಿಸುವಂತೆ ಸಚಿನ್ ವಾಜೆ ಮತ್ತು ಇತರ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಆರೋಪಿಸಿದ್ದರು.</p>.<p>ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ದೇಶ್ಮುಖ್ ಅಲ್ಲಗಳೆದಿದ್ದಾರೆ.</p>.<p>ಈ ಆರೋಪಗಳನ್ನು ಪ್ರಶ್ನಿಸಿರುವ ಸಚಿನ್ ಸಾವಂತ್, ಫೆಬ್ರುವರಿಯಲ್ಲಿ ಕೋವಿಡ್-19 ಸೋಂಕು ತಗುಲಿದ್ದರಿಂದಾಗಿ ದೇಶ್ಮುಖ್ ಆಸ್ಪತ್ರೆಯಲ್ಲಿದ್ದರು. ದೇಶ್ಮುಖ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ನಾನು ಅವರೊಂದಿಗೆ ಆನ್ಲೈನ್ ಮಾತುಕತೆ ನಡೆಸಿದ್ದೇನೆ. ಒಂದು ವೇಳೆ ಸಿಂಗ್ ಅವರ ಆರೋಪಗಳು ನಿಜವಾಗಿದ್ದರೆ, ಅವುಗಳನ್ನು ಹೇಳಲು ಮಾರ್ಚ್ವರೆಗೂ ಮತ್ತು ಅವರನ್ನು ವರ್ಗಾವಣೆ ಮಾಡುವವರೆಗೂ ಏಕೆ ಕಾಯುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/param-bir-singh-was-removed-as-mumbai-police-chief-for-free-and-fair-probe-anil-deshmukh-814490.html" itemprop="url">ಮುಕ್ತ ತನಿಖೆಗಾಗಿ ಪರಮ್ ಬೀರ್ ಸಿಂಗ್ ವರ್ಗಾವಣೆ: ಮಹಾರಾಷ್ಟ್ರ ಗೃಹ ಸಚಿವ </a></p>.<p>ಸಿಂಗ್ ಅವರ ಆಪ್ತ ಸಹಾಯಕ (ಸಚಿನ್ ವಾಜೆ) ಎನ್ಐಎ ವಶದಲ್ಲಿರುವುದರಿಂದ ಕೇಂದ್ರ ಏಜೆನ್ಸಿಗಳ ಒತ್ತಡಕ್ಕೆ ಅವರು ಒಳಗಾಗಿರಬಹುದು. ಸಿಂಗ್ ಅವರ ಆರೋಪಗಳು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಇವೆಲ್ಲವೂ ಕಥೆಯನ್ನು ಹೆಣೆದಿದ್ದಾಗಿದೆ. ಸಿಂಗ್ ಅವರ ಪತ್ರ ಬಹಿರಂಗವಾದ ಕೆಲವೇ ನಿಮಿಷಗಳಲ್ಲಿ ಬಿಜೆಪಿಯ ನಾಯಕರು ಸುದ್ದಿ ಚಾನೆಲ್ಗಳಿಗೆ ಬೈಟ್ಗಳನ್ನು ಹೇಗೆ ನೀಡಿದರು ಎಂದು ಅವರು ಆರೋಪಿಸಿದರು.</p>.<p>ಕಳೆದ ತಿಂಗಳು ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಫೋಟಕ ತುಂಬಿದ್ದ ವಾಹನದ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎನ್ನುವ ಕಾರಣಕ್ಕೆ ಮುಂಬೈ ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ಪರಮ್ ಬೀರ್ ಸಿಂಗ್ ಅವರನ್ನು ಮಹಾರಾಷ್ಟ್ರ ಸರ್ಕಾರ ವರ್ಗಾವಣೆ ಮಾಡಿ ಗೃಹ ರಕ್ಷಕ ದಳದ ಮುಖ್ಯಸ್ಥರನ್ನಾಗಿ ನೇಮಿಸಿ ಆದೇಶಿಸಿತ್ತು.</p>.<p>ಈ ಪ್ರಕರಣದಲ್ಲಿ ಎನ್ಐಎ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಬಂಧಿಸಿತ್ತು.</p>.<p><strong>ಇನ್ನಷ್ಟು...</strong></p>.<p><a href="https://www.prajavani.net/india-news/mumbai-police-commissioner-param-bir-singh-meets-cm-thackeray-814025.html" itemprop="url">ಸಚಿನ್ ವಾಜೆ ಬಂಧನ ಪ್ರಕರಣ: ಉದ್ಧವ್ ಠಾಕ್ರೆ ಭೇಟಿಯಾದ ಮುಂಬೈ ಪೊಲೀಸ್ ಆಯುಕ್ತ </a></p>.<p><a href="https://www.prajavani.net/explainer/controversial-police-officer-sachin-vaze-was-arrested-by-the-nia-mahindra-scorpio-suv-reliance-813160.html" itemprop="url">ಸಚಿನ್ ವಾಜೆ ಬಂಧನ ಆಗಿದ್ದೇಕೆ! ಇಲ್ಲಿದೆ ಕಂಪ್ಲೀಟ್ ರಿಪೋರ್ಟ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಮಹಾರಾಷ್ಟ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿರುವ ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬಿರ್ ಸಿಂಗ್ ಅವರು, ಕೇಂದ್ರದ ತನಿಖಾ ಸಂಸ್ಥೆಗಳ ಒತ್ತಡದಲ್ಲಿರಬಹುದು ಎಂದು ಭಾನುವಾರ ಹೇಳಿದೆ.</p>.<p>ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್, ಭಾರತದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಯೊಬ್ಬರು ಅಧಿಕಾರದಲ್ಲಿರುವವರ ವಿರುದ್ಧ ಆರೋಪಗಳನ್ನು ಮಾಡುತ್ತಿರುವುದು ಇದೇ ಮೊದಲೇನಲ್ಲ ಎಂದಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/param-birs-letter-waze-case-tainted-mvas-image-allies-need-to-introspect-raut-815233.html" itemprop="url">ಮಹಾರಾಷ್ಟ್ರ ಗೃಹ ಸಚಿವರ ವಿರುದ್ಧ ಆರೋಪ: ಎಂವಿಎ ಸರ್ಕಾರದ ವರ್ಚಸ್ಸಿಗೆ ಧಕ್ಕೆ </a></p>.<p>ಮುಂಬೈ ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾಯಿಸಿದ ನಂತರ, ಪರಮ್ ಬೀರ್ ಸಿಂಗ್ ಅವರು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಎನ್ಸಿಪಿ ಹಿರಿಯ ಮುಖಂಡ ದೇಶಮುಖ್, ಮುಂಬೈನ ಬಾರ್ ಮತ್ತು ಹೋಟೆಲ್ಗಳಿಂದ ಮಾಸಿಕ 100 ಕೋಟಿ ರೂ. ಸಂಗ್ರಹಿಸುವಂತೆ ಸಚಿನ್ ವಾಜೆ ಮತ್ತು ಇತರ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಆರೋಪಿಸಿದ್ದರು.</p>.<p>ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ದೇಶ್ಮುಖ್ ಅಲ್ಲಗಳೆದಿದ್ದಾರೆ.</p>.<p>ಈ ಆರೋಪಗಳನ್ನು ಪ್ರಶ್ನಿಸಿರುವ ಸಚಿನ್ ಸಾವಂತ್, ಫೆಬ್ರುವರಿಯಲ್ಲಿ ಕೋವಿಡ್-19 ಸೋಂಕು ತಗುಲಿದ್ದರಿಂದಾಗಿ ದೇಶ್ಮುಖ್ ಆಸ್ಪತ್ರೆಯಲ್ಲಿದ್ದರು. ದೇಶ್ಮುಖ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ನಾನು ಅವರೊಂದಿಗೆ ಆನ್ಲೈನ್ ಮಾತುಕತೆ ನಡೆಸಿದ್ದೇನೆ. ಒಂದು ವೇಳೆ ಸಿಂಗ್ ಅವರ ಆರೋಪಗಳು ನಿಜವಾಗಿದ್ದರೆ, ಅವುಗಳನ್ನು ಹೇಳಲು ಮಾರ್ಚ್ವರೆಗೂ ಮತ್ತು ಅವರನ್ನು ವರ್ಗಾವಣೆ ಮಾಡುವವರೆಗೂ ಏಕೆ ಕಾಯುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/param-bir-singh-was-removed-as-mumbai-police-chief-for-free-and-fair-probe-anil-deshmukh-814490.html" itemprop="url">ಮುಕ್ತ ತನಿಖೆಗಾಗಿ ಪರಮ್ ಬೀರ್ ಸಿಂಗ್ ವರ್ಗಾವಣೆ: ಮಹಾರಾಷ್ಟ್ರ ಗೃಹ ಸಚಿವ </a></p>.<p>ಸಿಂಗ್ ಅವರ ಆಪ್ತ ಸಹಾಯಕ (ಸಚಿನ್ ವಾಜೆ) ಎನ್ಐಎ ವಶದಲ್ಲಿರುವುದರಿಂದ ಕೇಂದ್ರ ಏಜೆನ್ಸಿಗಳ ಒತ್ತಡಕ್ಕೆ ಅವರು ಒಳಗಾಗಿರಬಹುದು. ಸಿಂಗ್ ಅವರ ಆರೋಪಗಳು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಇವೆಲ್ಲವೂ ಕಥೆಯನ್ನು ಹೆಣೆದಿದ್ದಾಗಿದೆ. ಸಿಂಗ್ ಅವರ ಪತ್ರ ಬಹಿರಂಗವಾದ ಕೆಲವೇ ನಿಮಿಷಗಳಲ್ಲಿ ಬಿಜೆಪಿಯ ನಾಯಕರು ಸುದ್ದಿ ಚಾನೆಲ್ಗಳಿಗೆ ಬೈಟ್ಗಳನ್ನು ಹೇಗೆ ನೀಡಿದರು ಎಂದು ಅವರು ಆರೋಪಿಸಿದರು.</p>.<p>ಕಳೆದ ತಿಂಗಳು ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಫೋಟಕ ತುಂಬಿದ್ದ ವಾಹನದ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎನ್ನುವ ಕಾರಣಕ್ಕೆ ಮುಂಬೈ ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ಪರಮ್ ಬೀರ್ ಸಿಂಗ್ ಅವರನ್ನು ಮಹಾರಾಷ್ಟ್ರ ಸರ್ಕಾರ ವರ್ಗಾವಣೆ ಮಾಡಿ ಗೃಹ ರಕ್ಷಕ ದಳದ ಮುಖ್ಯಸ್ಥರನ್ನಾಗಿ ನೇಮಿಸಿ ಆದೇಶಿಸಿತ್ತು.</p>.<p>ಈ ಪ್ರಕರಣದಲ್ಲಿ ಎನ್ಐಎ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಬಂಧಿಸಿತ್ತು.</p>.<p><strong>ಇನ್ನಷ್ಟು...</strong></p>.<p><a href="https://www.prajavani.net/india-news/mumbai-police-commissioner-param-bir-singh-meets-cm-thackeray-814025.html" itemprop="url">ಸಚಿನ್ ವಾಜೆ ಬಂಧನ ಪ್ರಕರಣ: ಉದ್ಧವ್ ಠಾಕ್ರೆ ಭೇಟಿಯಾದ ಮುಂಬೈ ಪೊಲೀಸ್ ಆಯುಕ್ತ </a></p>.<p><a href="https://www.prajavani.net/explainer/controversial-police-officer-sachin-vaze-was-arrested-by-the-nia-mahindra-scorpio-suv-reliance-813160.html" itemprop="url">ಸಚಿನ್ ವಾಜೆ ಬಂಧನ ಆಗಿದ್ದೇಕೆ! ಇಲ್ಲಿದೆ ಕಂಪ್ಲೀಟ್ ರಿಪೋರ್ಟ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>