ದಕ್ಷಿಣ ಕಾಶ್ಮೀರದಲ್ಲಿ, ಅದರಲ್ಲೂ ಪ್ರಮುಖವಾಗಿ ಪುಲ್ವಾಮಾದಲ್ಲಿ ಪಿಡಿಪಿಯನ್ನು ವಹೀದ್ ಪುನರ್ಸ್ಥಾಪಿಸಿದ್ದರು. ಉಗ್ರರಿಗೆ ನೆರವು ನೀಡಿದ ಪ್ರಕರಣದಲ್ಲಿ ಅಮಾನತುಗೊಂಡಿರುವ ಡಿಎಸ್ಪಿ ದೇವೇಂದರ್ ಸಿಂಗ್ ಅವರ ತನಿಖೆ ವೇಳೆ ವಹೀದ್ ಹೆಸರು ಕೇಳಿಬಂದಿತ್ತು. ‘ಭಯೋತ್ಪಾದನಾ ಸಂಚಿನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಇತರೆ ಆರೋಪಿಗಳ ಜೊತೆಗೂಡಿ ಬೆಂಬಲ ನೀಡಿದ ನವೀದ್ ಬಾಬು–ದೇವೇಂದರ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ವಹೀದ್ ಉರ್ ರೆಹಮಾನ್ ಪರ್ರಾ ಅವರನ್ನು ಬಂಧಿಸಿದೆ’ ಎಂದು ಎನ್ಐಎ ವಕ್ತಾರರೊಬ್ಬರು ತಿಳಿಸಿದರು.