ಪಾಲಕ್ಕಾಡ್, ಕೇರಳ (ಪಿಟಿಐ): ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಸ್ಥಳೀಯ ಕಾರ್ಯಕರ್ತ ಸುಬೈರ್ (43) ಎಂಬುವವರನ್ನು ಇರಿದು ಹತ್ಯೆ ಮಾಡಲಾಗಿದೆ.
‘ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಬೈಕ್ನಲ್ಲಿ ಹಿಂದಿರುಗುತ್ತಿದ್ದ ವೇಳೆ ಕಾರಿನಲ್ಲಿ ಬಂದು ಸುಬೈರ್ನನ್ನು ಅಡ್ಡಗಟ್ಟಿದಹಂತಕರು ಹರಿತವಾದ ಕತ್ತಿಯಿಂದ ಇರಿದಿದ್ದಾರೆ. ಇದು ರಾಜಕೀಯ ಹತ್ಯೆ ಎಂದು ಆಗಿರಬಹುದು’ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಹತ್ಯೆಯನ್ನು ಆರ್ಎಸ್ಎಸ್ ಮಾಡಿದೆ ಎಂದು ಪಿಎಫ್ಐ ಆರೋಪಿಸಿದೆ. ಆದರೆ ಈ ಆರೋಪಕ್ಕೆ ಆರ್ಎಸ್ಎಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.