ವಕೀಲ ಅಶ್ವಿನಿಕುಮಾರ್ ದುಬೆ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ‘ರಾಜಕೀಯದಲ್ಲಿರುವ ಭ್ರಷ್ಟಾಚಾರ ಮತ್ತು ಅಪರಾಧ ಎಂಬ ಕಳೆಗಳನ್ನು ನಿರ್ಮೂಲನೆ ಮಾಡಲು ಮತಪತ್ರ ಮತ್ತು ಇವಿಎಂನಲ್ಲಿ ರಾಜಕೀಯ ಪಕ್ಷದ ಚಿಹ್ನೆಗಳ ಬದಲಿಗೆ ಅಭ್ಯರ್ಥಿಯ ಹೆಸರು, ವಯಸ್ಸು, ಶೈಕ್ಷಣಿಕ ಅರ್ಹತೆ ಮತ್ತು ಛಾಯಾಚಿತ್ರ ಮುದ್ರಿಸುವುದು ಉತ್ತಮ ವಿಧಾನ ಎಂದು ಮನವಿ ಮಾಡಲಾಗಿದೆ.