ಬಳಿಕ ಮಾತನಾಡಿದ ಪ್ರಧಾನಿ, ಹಿಂದಿನ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ವಿಪರೀತ ಭ್ರಷ್ಟಾಚಾರವಿತ್ತು ಮತ್ತು ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಲಿಲ್ಲ. ತ್ರಿಪುರವನ್ನು ಅಭಿವೃದ್ಧಿಪಡಿಸುವ ಯಾವುದೇ ಉದ್ದೇಶ ಆ ಸರ್ಕಾರಗಳಿಗೆ ಇರಲಿಲ್ಲ ಎಂದು ದೂರಿದ್ದಾರೆ. ಜೊತೆಗೆ,'ಬಡತನ ಮತ್ತು ಹಿಂದುಳಿದಿರುವಿಕೆಯು ತ್ರಿಪುರಾದ ವಿಧಿಬರಹದೊಂದಿಗೆ ಅಂಟಿಕೊಂಡಿತ್ತು' ಎಂದು ಉಲ್ಲೇಖಿಸಿದ್ದಾರೆ.