ನವದೆಹಲಿ: ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಅವರ ಜನ್ಮ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗೌರವನಮನ ಸಲ್ಲಿಸಿದರು. ಈ ವೇಳೆ ನಾರಾಯಣ ಗುರು ಅವರನ್ನು ‘ದೂರದೃಷ್ಟಿಯ ದಾರ್ಶನಿಕ’ ಎಂದು ಬಣ್ಣಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಶ್ರೀ ನಾರಾಯಣ ಗುರು ಅವರ ಮುಂದೆ ನಾನು ತಲೆಬಾಗುತ್ತೇನೆ. ಅವರ ಜೀವನ, ಕಲೆಗಳುಆಧ್ಯಾತ್ಮಿಕತೆ ಹಾಗೂ ಸಮಾಜ ಸುಧಾರಣೆಯ ಉತ್ತಮ ಮಿಶ್ರಣವಾಗಿದೆ. ಅವರು ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದ್ದರು’ ಎಂದು ಹೇಳಿದ್ದಾರೆ.
ಕೇರಳದಲ್ಲಿ ಜನಿಸಿದ್ದ ಶ್ರೀ ನಾರಾಯಣ ಗುರು ಅವರು19ನೇ ಶತಮಾನದಲ್ಲಿ ಸಾಮಾಜಿಕ ತಾರತಮ್ಯವನ್ನು ಕೊನೆಗೊಳಿಸಿ, ಜನರಲ್ಲಿ ಒಗ್ಗಟ್ಟನ್ನು ಬೆಳಸಲು ಹೋರಾಡಿದ್ದರು.
I bow to the venerable Sree Narayana Guru on his Jayanti. His life and works epitomised the perfect blend of spirituality and social reform. He emphasised on education and empowerment of women. He was a farsighted visionary whose ideals give strength to many across India. pic.twitter.com/PTTCg8fh8h