<p class="title"><strong>ನವದೆಹಲಿ:</strong> ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೊಲೊಗ್ರಾಂ ಸ್ವರೂಪದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂಜೆ ಇಲ್ಲಿನ ಇಂಡಿಯಾಗೇಟ್ ಬಳಿ ಅನಾವರಣಗೊಳಿಸಿದರು.</p>.<p class="title">ನೇತಾಜಿ ಅವರ 125ನೇ ಜನ್ಮದಿನದಂದು ನಡೆದ ಈ ಕಾರ್ಯಕ್ರಮಕ್ಕೆ ಹಲವು ಪ್ರಮುಖರು ಸಾಕ್ಷಿಯಾದರು. ಅಮೃತಶಿಲೆಯಲ್ಲಿ ರೂಪಿಸುವ ಪ್ರತಿಮೆ ಸಿದ್ಧವಾಗುವವರೆಗೂ ಹೊಲೊಗ್ರಾಂ ಪ್ರತಿಮೆಯು ಈ ಸ್ಥಳದಲ್ಲಿರಲಿದೆ.</p>.<p>ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಗಣನೀಯ ಸಾಧನೆಗಾಗಿ ನೀಡುವ ಬೋಸ್ ಸ್ಮಾರಕ ‘ಅಪದಾ ಪ್ರಬಂಧನ್ ಪುರಸ್ಕಾರ್’ನ 2019–2022ರ ನಾಲ್ಕು ವರ್ಷದ ಪ್ರಶಸ್ತಿಗಳನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಪ್ರದಾನ ಮಾಡಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ‘ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಅವರು ನೀಡಿದ ಅನನ್ಯ ಕೊಡುಗೆ ಮತ್ತು ಅದಕ್ಕಾಗಿ ದೇಶ ಅವರಿಗೆ ಆಭಾರಿಯಾಗಿ ಇರುವುದರ ದ್ಯೋತಕವೇ ಈ ಪ್ರತಿಮೆ’ ಎಂದು ಪ್ರತಿಪಾದಿಸಿದರು.</p>.<p>‘ನಾವು ನೇತಾಜಿ ಅವರ ‘ಮಾಡಬಲ್ಲೆ, ಮಾಡುತ್ತೇನೆ’ ಎಂಬ ಚಿಂತನೆಯಿಂದ ಪ್ರೇರೇಪಣೆಗೊಂಡು ಮುನ್ನಡೆಯಬೇಕಿದೆ‘ ಎಂದು ಹೇಳಿದರು. ‘ಈ ಪ್ರತಿಮೆಯು ಈಗಿನ ಮತ್ತು ಭವಿಷ್ಯದ ಯುವಪೀಳಿಗೆಗೆ ಅವರ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಅವರ ಕರ್ತವ್ಯವನ್ನು ನೆನಪಿಸಿ, ಉತ್ತೇಜನ ನೀಡಲಿದೆ‘ ಎಂದು ಆಶಿಸಿದರು.</p>.<p>30000 ಲ್ಯುಮೆನ್ಸ್, 4ಕೆ ಸಾಮರ್ಥ್ಯದ ಪ್ರೊಜೆಕ್ಟರ್ ಬಳಸಿ ಹೊಲೊಗ್ರಾಂ ಪ್ರತಿಮೆ ಬಿಂಬಿಸಲಾಗಿದೆ. ಪ್ರತಿಮೆ ಚಿತ್ರ ಮೂಡುವಂತೆ ಶೇ 90ರಷ್ಟು ಪಾರದರ್ಶಕವಾದ ಪರದೆ ಅಳವಡಿಸಿದ್ದು, ಸಾಮಾನ್ಯ ನೋಟಕ್ಕೆ ಪರದೆ ಗೋಚರವಾಗದು.</p>.<p>ಮೂರು ಆಯಾಮದ (3ಡಿ) ನೇತಾಜಿ ಅವರ ಪ್ರತಿಮೆಯನ್ನು, ತಂತ್ರಜ್ಞಾನ ಬಳಸಿ ಈ ಪರದೆಯ ಮೇಲೆ ಮೂಡಿಸಲಾಗುತ್ತದೆ. ಹೊಲೊಗ್ರಾಂನ ಈ ಪ್ರತಿಮೆಯ ಎತ್ತರ 28 ಅಡಿ ಆಗಿದ್ದು, ಅಗಲ 6 ಆಡಿ ಆಗಿರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೊಲೊಗ್ರಾಂ ಸ್ವರೂಪದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂಜೆ ಇಲ್ಲಿನ ಇಂಡಿಯಾಗೇಟ್ ಬಳಿ ಅನಾವರಣಗೊಳಿಸಿದರು.</p>.<p class="title">ನೇತಾಜಿ ಅವರ 125ನೇ ಜನ್ಮದಿನದಂದು ನಡೆದ ಈ ಕಾರ್ಯಕ್ರಮಕ್ಕೆ ಹಲವು ಪ್ರಮುಖರು ಸಾಕ್ಷಿಯಾದರು. ಅಮೃತಶಿಲೆಯಲ್ಲಿ ರೂಪಿಸುವ ಪ್ರತಿಮೆ ಸಿದ್ಧವಾಗುವವರೆಗೂ ಹೊಲೊಗ್ರಾಂ ಪ್ರತಿಮೆಯು ಈ ಸ್ಥಳದಲ್ಲಿರಲಿದೆ.</p>.<p>ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಗಣನೀಯ ಸಾಧನೆಗಾಗಿ ನೀಡುವ ಬೋಸ್ ಸ್ಮಾರಕ ‘ಅಪದಾ ಪ್ರಬಂಧನ್ ಪುರಸ್ಕಾರ್’ನ 2019–2022ರ ನಾಲ್ಕು ವರ್ಷದ ಪ್ರಶಸ್ತಿಗಳನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಪ್ರದಾನ ಮಾಡಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ‘ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಅವರು ನೀಡಿದ ಅನನ್ಯ ಕೊಡುಗೆ ಮತ್ತು ಅದಕ್ಕಾಗಿ ದೇಶ ಅವರಿಗೆ ಆಭಾರಿಯಾಗಿ ಇರುವುದರ ದ್ಯೋತಕವೇ ಈ ಪ್ರತಿಮೆ’ ಎಂದು ಪ್ರತಿಪಾದಿಸಿದರು.</p>.<p>‘ನಾವು ನೇತಾಜಿ ಅವರ ‘ಮಾಡಬಲ್ಲೆ, ಮಾಡುತ್ತೇನೆ’ ಎಂಬ ಚಿಂತನೆಯಿಂದ ಪ್ರೇರೇಪಣೆಗೊಂಡು ಮುನ್ನಡೆಯಬೇಕಿದೆ‘ ಎಂದು ಹೇಳಿದರು. ‘ಈ ಪ್ರತಿಮೆಯು ಈಗಿನ ಮತ್ತು ಭವಿಷ್ಯದ ಯುವಪೀಳಿಗೆಗೆ ಅವರ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಅವರ ಕರ್ತವ್ಯವನ್ನು ನೆನಪಿಸಿ, ಉತ್ತೇಜನ ನೀಡಲಿದೆ‘ ಎಂದು ಆಶಿಸಿದರು.</p>.<p>30000 ಲ್ಯುಮೆನ್ಸ್, 4ಕೆ ಸಾಮರ್ಥ್ಯದ ಪ್ರೊಜೆಕ್ಟರ್ ಬಳಸಿ ಹೊಲೊಗ್ರಾಂ ಪ್ರತಿಮೆ ಬಿಂಬಿಸಲಾಗಿದೆ. ಪ್ರತಿಮೆ ಚಿತ್ರ ಮೂಡುವಂತೆ ಶೇ 90ರಷ್ಟು ಪಾರದರ್ಶಕವಾದ ಪರದೆ ಅಳವಡಿಸಿದ್ದು, ಸಾಮಾನ್ಯ ನೋಟಕ್ಕೆ ಪರದೆ ಗೋಚರವಾಗದು.</p>.<p>ಮೂರು ಆಯಾಮದ (3ಡಿ) ನೇತಾಜಿ ಅವರ ಪ್ರತಿಮೆಯನ್ನು, ತಂತ್ರಜ್ಞಾನ ಬಳಸಿ ಈ ಪರದೆಯ ಮೇಲೆ ಮೂಡಿಸಲಾಗುತ್ತದೆ. ಹೊಲೊಗ್ರಾಂನ ಈ ಪ್ರತಿಮೆಯ ಎತ್ತರ 28 ಅಡಿ ಆಗಿದ್ದು, ಅಗಲ 6 ಆಡಿ ಆಗಿರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>