ಅಲ್ಲದೇ, ಪ್ರದೇಶ ಕಾಂಗ್ರೆಸ್ ಸಮಿತಿವತಿಯಿಂದ ನಿರ್ಮಿಸಿರುವ ಮನೆಯನ್ನು ರಾಹುಲ್ ಗಾಂಧಿ ಅವರು ಒಬ್ಬ ಮಹಿಳೆಗೆ ಹಸ್ತಾಂತರಿಸಿದರು. ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡಿದ್ದ ಮಹಿಳೆಗೆ ರಾಜ್ಯ ಸರ್ಕಾರ ಪುನರ್ವಸತಿಯನ್ನು ನಿರಾಕರಿಸಿತ್ತು. ಸರ್ಕಾರದ ಈ ಕ್ರಮವನ್ನು ಖಂಡಿಸಿ, ಪಕ್ಷದ ವತಿಯಿಂದ ಮನೆ ನಿರ್ಮಿಸಿ, ಮಹಿಳೆಗೆ ನೀಡಲಾಗಿದೆ.