ಕೊಪ್ಪಳ: ಇಲ್ಲಿಗೆ ಸಮೀಪದ ಕಿಡದಾಳ ರೈಲು ಗೇಟಿನ ಬಳಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಶನಿವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಳ್ಳಾರಿಯ ತೇಜಶ್ರೀ (23)ಆತ್ಮಹತ್ಯೆ ಮಾಡಿಕೊಂಡವರು. ಇಲ್ಲಿನ ವೈದ್ಯಕೀಯ ಆಸ್ಪತ್ರೆಯಲ್ಲಿ ಇಂಟರ್ನ್ಷಿಪ್ ಮಾಡುತ್ತಿದ್ದರು. ಹಲವು ತಿಂಗಳಿಂದ ಮಾನಸಿಕವಾಗಿ ನೊಂದಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಲೊಕೊ ಪೈಲಟ್ ಪ್ರಕಾರ, ಯುವತಿ ಆತಹತ್ಯೆ ಮಾಡಿಕೊಂಡಿದ್ದಾಳೆ. ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ ಎಂದು ಗದಗ ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ತೇಜಶ್ರೀ ಅವರು ಬಳ್ಳಾರಿಯ ಸಾಹಿತಿ ವಿನೋದಾ ಕರ್ಣಂ ಅವರ ಪುತ್ರಿ.ವಿನೋದಾ ಅವರು ಘಟನೆ ಕುರಿತು ಫೇಸ್ಬುಕ್ನಲ್ಲಿ‘ನನ್ನ ಮಗಳು ಡಾ. ತೇಜಶ್ರೀ ಅಪಘಾತದಲ್ಲಿ ತೀರಿಕೊಂಡಳು. ದೇವರು ನನ್ನ ದೇವರು.. ನನ್ನ ಜೀವ ಇನ್ನಿಲ್ಲ’ಎಂದು ಬರೆದುಕೊಂಡಿದ್ದಾರೆ.