<p><strong>ಕೂಚ್ಬೆಹರ್</strong>: ಜನರ ಸೇವೆ ಮಾಡುವ ಅವಕಾಶವನ್ನು ತಮ್ಮ ಪಕ್ಷಕ್ಕೆಕಲ್ಪಿಸಿಕೊಡುವ ಮೂಲಕಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ವಿಶ್ರಾಂತಿ ನೀಡಲುಪಶ್ಚಿಮ ಬಂಗಾಳವು ನಿರ್ಧರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಭಿಪ್ರಾಯಪಟ್ಟಿದ್ದಾರೆ.</p>.<p>ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿದಿನ್ಹಾಟ ಪ್ರದೇಶದಲ್ಲಿ ನಡೆದ ರೋಡ್ಶೋದಲ್ಲಿ ಭಾಗವಹಿಸಿದ ನಡ್ಡಾ, ʼಈ ಸಮಾರಂಭವು, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜನರು ಉತ್ಸುಕರಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಜನರುʼಮಮತಾಜೀಗೆ ವಿಶ್ರಾಂತಿ ನೀಡಿ, ಬಿಜೆಪಿಗೆ ಕೆಲಸ ಕೊಡೋಣʼ ಎನ್ನುತ್ತಿದ್ದಾರೆʼಎಂದಿದ್ದಾರೆ.</p>.<p>ಟಿಎಂಸಿ ನೇತೃತ್ವದ ಸರ್ಕಾರದ ವಿರುದ್ಧವೂ ಕಿಡಿ ಕಾರಿರುವ ಬಿಜೆಪಿ ಅಧ್ಯಕ್ಷ, ʼಬಂಗಾಳದ ಜನರು ಭ್ರಷ್ಟಾಚಾರವನ್ನು ವಿರೋಧಿಸುತ್ತಿದ್ದಾರೆ. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಉತ್ತಮಗೊಳಿಸಲು ಬಯಸುವುದಾದರೆ, ಅವರು ಬಿಜೆಪಿಗೆ ಮತ ನೀಡಬೇಕುʼ ಎಂದು ಕರೆ ನೀಡಿದ್ದಾರೆ.</p>.<p>ʼಅಂಫಾನ್ ಚಂಡಮಾರುತದ ಬಳಿಕ ಕೇಂದ್ರ ಸರ್ಕಾರ ಕಳುಹಿಸಿದ ಪರಿಹಾರ ಸಾಮಾಗ್ರಿಗಳು ಟಿಎಂಸಿ ನಾಯಕರ ನಿವಾಸಗಳಲ್ಲಿ ಪತ್ತೆಯಾಗಿವೆ. ಈ ಕಾರಣಕ್ಕೆ ಜನರು ಟಿಎಂಸಿಯನ್ನು ಶಿಕ್ಷಿಸಬೇಕುʼ ಎಂದು ಹೇಳಿದ್ದಾರೆ.</p>.<p>ಬಂಗಾಳ ವಿಧಾನಸಭೆಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಸದ್ಯ ಮೂರು ಹಂತಗಳು ಮುಗಿದಿದ್ದು, ನಾಲ್ಕನೇ ಹಂತ ಏಪ್ರಿಲ್ 10 ರಂದು ನಡೆಯಲಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಚ್ಬೆಹರ್</strong>: ಜನರ ಸೇವೆ ಮಾಡುವ ಅವಕಾಶವನ್ನು ತಮ್ಮ ಪಕ್ಷಕ್ಕೆಕಲ್ಪಿಸಿಕೊಡುವ ಮೂಲಕಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ವಿಶ್ರಾಂತಿ ನೀಡಲುಪಶ್ಚಿಮ ಬಂಗಾಳವು ನಿರ್ಧರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಭಿಪ್ರಾಯಪಟ್ಟಿದ್ದಾರೆ.</p>.<p>ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿದಿನ್ಹಾಟ ಪ್ರದೇಶದಲ್ಲಿ ನಡೆದ ರೋಡ್ಶೋದಲ್ಲಿ ಭಾಗವಹಿಸಿದ ನಡ್ಡಾ, ʼಈ ಸಮಾರಂಭವು, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜನರು ಉತ್ಸುಕರಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಜನರುʼಮಮತಾಜೀಗೆ ವಿಶ್ರಾಂತಿ ನೀಡಿ, ಬಿಜೆಪಿಗೆ ಕೆಲಸ ಕೊಡೋಣʼ ಎನ್ನುತ್ತಿದ್ದಾರೆʼಎಂದಿದ್ದಾರೆ.</p>.<p>ಟಿಎಂಸಿ ನೇತೃತ್ವದ ಸರ್ಕಾರದ ವಿರುದ್ಧವೂ ಕಿಡಿ ಕಾರಿರುವ ಬಿಜೆಪಿ ಅಧ್ಯಕ್ಷ, ʼಬಂಗಾಳದ ಜನರು ಭ್ರಷ್ಟಾಚಾರವನ್ನು ವಿರೋಧಿಸುತ್ತಿದ್ದಾರೆ. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಉತ್ತಮಗೊಳಿಸಲು ಬಯಸುವುದಾದರೆ, ಅವರು ಬಿಜೆಪಿಗೆ ಮತ ನೀಡಬೇಕುʼ ಎಂದು ಕರೆ ನೀಡಿದ್ದಾರೆ.</p>.<p>ʼಅಂಫಾನ್ ಚಂಡಮಾರುತದ ಬಳಿಕ ಕೇಂದ್ರ ಸರ್ಕಾರ ಕಳುಹಿಸಿದ ಪರಿಹಾರ ಸಾಮಾಗ್ರಿಗಳು ಟಿಎಂಸಿ ನಾಯಕರ ನಿವಾಸಗಳಲ್ಲಿ ಪತ್ತೆಯಾಗಿವೆ. ಈ ಕಾರಣಕ್ಕೆ ಜನರು ಟಿಎಂಸಿಯನ್ನು ಶಿಕ್ಷಿಸಬೇಕುʼ ಎಂದು ಹೇಳಿದ್ದಾರೆ.</p>.<p>ಬಂಗಾಳ ವಿಧಾನಸಭೆಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಸದ್ಯ ಮೂರು ಹಂತಗಳು ಮುಗಿದಿದ್ದು, ನಾಲ್ಕನೇ ಹಂತ ಏಪ್ರಿಲ್ 10 ರಂದು ನಡೆಯಲಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>