<p><strong>ನವದೆಹಲಿ: </strong>ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಸಂಸತ್ನಲ್ಲಿ ಮಾಡಿರುವ ಭಾಷಣಕ್ಕೆ ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿದ್ದು, ‘ಭಾಷಣವು ಆಡಳಿತಾರೂಢ ಬಿಜೆಪಿಯ 2024ರ ಪ್ರಣಾಳಿಕೆಯ ಮೊದಲ ಅಧ್ಯಾಯ’ ಎಂದು ಲೇವಡಿ ಮಾಡಿವೆ.</p>.<p>ತೈಲ ದರ ಏರಿಕೆ ನಿಯಂತ್ರಣ, ಕೋಮು ಸೌಹಾರ್ದತೆ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳು ಭಾಷಣದಲ್ಲಿ ಕಾಣೆಯಾಗಿದ್ದವು ಎಂದೂ ಹೇಳಿವೆ.</p>.<p>‘ಸರ್ಕಾರದ ಹೇಳಿಕೆಯು ರಾಷ್ಟ್ರಪತಿಗಳ ಮೂಲಕ ಹೊರಬಂದಿದೆ. ಅದರಲ್ಲಿ ಹೊಸತೇನೂ ಇಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.</p>.<p>‘ಸರ್ಕಾರ ಹೇಳಿರುವಂತೆ ದೇಶವು ತುಂಬಾ ಪ್ರಗತಿ ಸಾಧಿಸಿದ್ದರೆ, ನಿರುದ್ಯೋಗ, ಹಣದುಬ್ಬರ ಮೊದಲಾದವುಗಳ ಪರಿಣಾಮವಾಗಿ ಬಡವರು ಯಾಕೆ ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದೂ ಪ್ರಶ್ನಿಸಿದ್ದಾರೆ.</p>.<p>ಪ್ರಧಾನಿ ನರೇಂದ್ರ ಮೋದಿ ಅವರು ಮರುನಾಮಕರಣ ಮಾಡಿರುವ ಯೋಜನೆಗಳು ಬಡವರಿಗೆ ತಲುಪುತ್ತಿಲ್ಲ ಎಂದೂ ಖರ್ಗೆ ಅವರು ಆರೋಪಿಸಿದ್ದಾರೆ.</p>.<p>‘ರಾಷ್ಟ್ರಪತಿಗಳ ಭಾಷಣವು ಕೇಂದ್ರ ಸರ್ಕಾರದಿಂದ ಬರೆಯಲ್ಪಟ್ಟಿದ್ದರೂ ಅದರಲ್ಲಿ ಪ್ರಮುಖ ವಿಚಾರಗಳ ಪ್ರಸ್ತಾಪವೇ ಇರಲಿಲ್ಲ’ ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಿಯನ್ ಹೇಳಿದ್ದಾರೆ.</p>.<p>‘ಮಹಿಳೆಯರ, ಯುವಕರ, ದಲಿತ ಮತ್ತು ಬುಡಕಟ್ಟು ಜನರ ಸಬಲೀಕರಣವು ಕೇವಲ ಕಾಗದದಲ್ಲಷ್ಟೇ ಇದೆ’ ಎಂದು ಸಿಪಿಐ ಸಂಸದ ಬಿನೋಯ್ ವಿಶ್ವಂ ಟ್ವೀಟ್ ಮಾಡಿದ್ದಾರೆ.</p>.<p>ಸಂಸತ್ನಲ್ಲಿ ಮಾಡಿರುವ ತಮ್ಮ ಮೊದಲ ಭಾಷಣದಲ್ಲಿ ಮುರ್ಮು ಅವರು, ‘ದೇಶವು ಸ್ಥಿರ, ನಿರ್ಭೀತ, ನಿರ್ಣಾಯಕ ಸರ್ಕಾರವನ್ನು ಹೊಂದಿದೆ. ಮತ್ತು ಅದು ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ವರ್ಗದ ಜನರಿಗಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದ್ದರು.</p>.<p><strong>ಬದಲಾವಣೆಯ ಚಿತ್ರಣ ನೀಡಿದ ಭಾಷಣ: </strong>‘ದ್ರೌಪದಿ ಮುರ್ಮು ಅವರ ಭಾಷಣವು ವಿಸ್ತಾರವಾದ ವಿಷಯಗಳನ್ನು ಹೊಂದಿತ್ತು ಮತ್ತು ವಿವಿಧ ಕ್ಷೇತ್ರಗಳಲ್ಲಾದ ಮಹತ್ವದ ಬದಲಾವಣೆಗಳ ಆಳವಾದ ಚಿತ್ರಣವನ್ನು ನೀಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.</p>.<p>‘ಸಾಮಾನ್ಯ ಜನರನ್ನು ಹೇಗೆ ಸಬಲೀಕರಣ ಮಾಡಲಾಗಿದೆ’ ಎಂಬುದನ್ನು ಭಾಷಣವು ಒತ್ತಿ ಹೇಳಿದೆ ಎಂದೂ ಟ್ವೀಟ್ ಮಾಡಿದ್ದಾರೆ.</p>.<p><strong>ಇವನ್ನೂ ಓದಿ...</strong></p>.<p><strong><a href="https://www.prajavani.net/india-news/president-droupadi-murmu-lays-out-vision-for-amrit-kaal-to-build-developed-india-in-25-years-1011279.html" target="_blank">ನಿರ್ಭೀತ, ಪಕ್ಷಪಾತ ಮಾಡದ ಕೇಂದ್ರ ಸರ್ಕಾರ: ರಾಷ್ಟ್ರಪತಿ ದ್ರೌಪದಿ ಮುರ್ಮು</a></strong></p>.<p><strong><a href="https://www.prajavani.net/india-news/president-murmu-lays-out-vision-for-amrit-kaal-to-build-developed-india-in-25-years-1011247.html" target="_blank">ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು: ದ್ರೌಪದಿ ಮುರ್ಮು</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಸಂಸತ್ನಲ್ಲಿ ಮಾಡಿರುವ ಭಾಷಣಕ್ಕೆ ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿದ್ದು, ‘ಭಾಷಣವು ಆಡಳಿತಾರೂಢ ಬಿಜೆಪಿಯ 2024ರ ಪ್ರಣಾಳಿಕೆಯ ಮೊದಲ ಅಧ್ಯಾಯ’ ಎಂದು ಲೇವಡಿ ಮಾಡಿವೆ.</p>.<p>ತೈಲ ದರ ಏರಿಕೆ ನಿಯಂತ್ರಣ, ಕೋಮು ಸೌಹಾರ್ದತೆ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳು ಭಾಷಣದಲ್ಲಿ ಕಾಣೆಯಾಗಿದ್ದವು ಎಂದೂ ಹೇಳಿವೆ.</p>.<p>‘ಸರ್ಕಾರದ ಹೇಳಿಕೆಯು ರಾಷ್ಟ್ರಪತಿಗಳ ಮೂಲಕ ಹೊರಬಂದಿದೆ. ಅದರಲ್ಲಿ ಹೊಸತೇನೂ ಇಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.</p>.<p>‘ಸರ್ಕಾರ ಹೇಳಿರುವಂತೆ ದೇಶವು ತುಂಬಾ ಪ್ರಗತಿ ಸಾಧಿಸಿದ್ದರೆ, ನಿರುದ್ಯೋಗ, ಹಣದುಬ್ಬರ ಮೊದಲಾದವುಗಳ ಪರಿಣಾಮವಾಗಿ ಬಡವರು ಯಾಕೆ ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದೂ ಪ್ರಶ್ನಿಸಿದ್ದಾರೆ.</p>.<p>ಪ್ರಧಾನಿ ನರೇಂದ್ರ ಮೋದಿ ಅವರು ಮರುನಾಮಕರಣ ಮಾಡಿರುವ ಯೋಜನೆಗಳು ಬಡವರಿಗೆ ತಲುಪುತ್ತಿಲ್ಲ ಎಂದೂ ಖರ್ಗೆ ಅವರು ಆರೋಪಿಸಿದ್ದಾರೆ.</p>.<p>‘ರಾಷ್ಟ್ರಪತಿಗಳ ಭಾಷಣವು ಕೇಂದ್ರ ಸರ್ಕಾರದಿಂದ ಬರೆಯಲ್ಪಟ್ಟಿದ್ದರೂ ಅದರಲ್ಲಿ ಪ್ರಮುಖ ವಿಚಾರಗಳ ಪ್ರಸ್ತಾಪವೇ ಇರಲಿಲ್ಲ’ ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಿಯನ್ ಹೇಳಿದ್ದಾರೆ.</p>.<p>‘ಮಹಿಳೆಯರ, ಯುವಕರ, ದಲಿತ ಮತ್ತು ಬುಡಕಟ್ಟು ಜನರ ಸಬಲೀಕರಣವು ಕೇವಲ ಕಾಗದದಲ್ಲಷ್ಟೇ ಇದೆ’ ಎಂದು ಸಿಪಿಐ ಸಂಸದ ಬಿನೋಯ್ ವಿಶ್ವಂ ಟ್ವೀಟ್ ಮಾಡಿದ್ದಾರೆ.</p>.<p>ಸಂಸತ್ನಲ್ಲಿ ಮಾಡಿರುವ ತಮ್ಮ ಮೊದಲ ಭಾಷಣದಲ್ಲಿ ಮುರ್ಮು ಅವರು, ‘ದೇಶವು ಸ್ಥಿರ, ನಿರ್ಭೀತ, ನಿರ್ಣಾಯಕ ಸರ್ಕಾರವನ್ನು ಹೊಂದಿದೆ. ಮತ್ತು ಅದು ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ವರ್ಗದ ಜನರಿಗಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದ್ದರು.</p>.<p><strong>ಬದಲಾವಣೆಯ ಚಿತ್ರಣ ನೀಡಿದ ಭಾಷಣ: </strong>‘ದ್ರೌಪದಿ ಮುರ್ಮು ಅವರ ಭಾಷಣವು ವಿಸ್ತಾರವಾದ ವಿಷಯಗಳನ್ನು ಹೊಂದಿತ್ತು ಮತ್ತು ವಿವಿಧ ಕ್ಷೇತ್ರಗಳಲ್ಲಾದ ಮಹತ್ವದ ಬದಲಾವಣೆಗಳ ಆಳವಾದ ಚಿತ್ರಣವನ್ನು ನೀಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.</p>.<p>‘ಸಾಮಾನ್ಯ ಜನರನ್ನು ಹೇಗೆ ಸಬಲೀಕರಣ ಮಾಡಲಾಗಿದೆ’ ಎಂಬುದನ್ನು ಭಾಷಣವು ಒತ್ತಿ ಹೇಳಿದೆ ಎಂದೂ ಟ್ವೀಟ್ ಮಾಡಿದ್ದಾರೆ.</p>.<p><strong>ಇವನ್ನೂ ಓದಿ...</strong></p>.<p><strong><a href="https://www.prajavani.net/india-news/president-droupadi-murmu-lays-out-vision-for-amrit-kaal-to-build-developed-india-in-25-years-1011279.html" target="_blank">ನಿರ್ಭೀತ, ಪಕ್ಷಪಾತ ಮಾಡದ ಕೇಂದ್ರ ಸರ್ಕಾರ: ರಾಷ್ಟ್ರಪತಿ ದ್ರೌಪದಿ ಮುರ್ಮು</a></strong></p>.<p><strong><a href="https://www.prajavani.net/india-news/president-murmu-lays-out-vision-for-amrit-kaal-to-build-developed-india-in-25-years-1011247.html" target="_blank">ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು: ದ್ರೌಪದಿ ಮುರ್ಮು</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>