ನೂತನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಶಿಕ್ಷಣ ಖಾತೆ ರಾಜ್ಯ ಸಚಿವರು ಈ ಸಮಾಲೋಚನೆಯ ವೇಳೆ ಹಾಜರಿದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಗೋವರ್ಧನ್ ರಂಗರಾಜನ್, ಐಐಟಿ ಬಾಂಬೆಯ ಪ್ರೊ. ಸುಭಾಸಿಸ್ ಚೌಧುರಿ, ಐಐಟಿ ಮದ್ರಾಸ್ನ ಪ್ರೊ. ಭಾಸ್ಕರ್ ರಾಮಮೂರ್ತಿ, ಐಐಟಿ ಕಾನ್ಪುರದ ಪ್ರೊ. ಅಭಯ್ ಕರಂಡಿಕರ್ ಅವರೂ ಸಮಾಲೋಚನೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರಲ್ಲಿ ಸೇರಿದ್ದರು.