ನವದೆಹಲಿ: ‘ಖಾಲಿಸ್ತಾನ ಪರವಾಗಿ ಲಂಡನ್ನಲ್ಲಿ ಭಾನುವಾರ ಹೋರಾಟ ನಡೆಸುವ ವೇಳೆ ಭಾರತೀಯ ಹೈಕಮಿಷನ್ ಎದುರು ಅಳವಡಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದ ಪ್ರತ್ಯೇಕತಾವಾದಿಗಳನ್ನು ಕೂಡಲೇ ಬಂಧಿಸುವಂತೆ ಬ್ರಿಟನ್ ಸರ್ಕಾರವನ್ನು ಭಾರತ ಒತ್ತಾಯಿಸಿದೆ’ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಸೋಮವಾರ ತಿಳಿಸಿದ್ದಾರೆ.