ರೈಲ್ವೆ ಪ್ಲಾಟ್ಫಾರಂ ಮತ್ತು ಹಳಿಗಳ ಮೇಲೆ ಪ್ರತಿಭಟನೆ ಮುಂದುವರಿದಿರುವುದರಿಂದ ಈಗಾಗಲೇ ₹1200 ಕೋಟಿ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ. ರಾಜ್ಯದ ಜಂಡಿಯಾಲ, ನಭಾ, ತಲ್ವಾಂಡಿ ಸಾಬೊ ಮತ್ತು ಬಟಿಂಡಾ ಸೇರಿದಂತೆ ಕೆಲವು ಕಡೆಗಳಲ್ಲಿ ಇನ್ನೂ ರೈಲು ತಡೆ ಮುಂದುವರಿದಿದೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆ ಮತ್ತು ಕಾರ್ಯಾಚರಣೆ ದೃಷ್ಟಿಯಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ‘ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.