<p><strong>ನವದೆಹಲಿ</strong>: ಮುಂಗಾರು ಹಂಗಾಮಿನಲ್ಲಿ ರಾಷ್ಟ್ರ ರಾಜಧಾನಿಯನ್ನು ಜಲದಿಗ್ಭಂಧನದಿಂದ ಮುಕ್ತವಾಗಿಡಲು ಅಗತ್ಯ ಸಿದ್ಧತೆ ನಡೆಸುವುದಕ್ಕಾಗಿ ಇಲಾಖೆ ಯಾವ ವಲಯದ ಸಿಬ್ಬಂದಿಯೂ ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಲೋಕೋಪಯೋಗಿ (ಪಿಡಬ್ಲ್ಯೂಡಿ) ಇಲಾಖೆ ಪ್ರಕಟಿಸಿದೆ.</p>.<p>ದೆಹಲಿ ಸರ್ಕಾರದ ಪಿಡಬ್ಲ್ಯೂಡಿ ಕಚೇರಿ ಹೊರಡಿಸಿರುವ ಆದೇಶದ ಅನ್ವಯ, ‘ತುಂಬಾ ತುರ್ತು ಪರಿಸ್ಥಿತಿ ಅಥವಾ ಕೆಲವೊಂದು ಅನಿವಾರ್ಯ ಪ್ರಸಂಗಗಳಲ್ಲಿ ರಜೆ ತೆಗೆದುಕೊಳ್ಳಬೇಕಾದರೆ, ಮುಖ್ಯ ಎಂಜಿನಿಯರ್ ಅವರಿಂದ ಮೊದಲೇ ಅನುಮತಿ ಪಡೆದಿರಬೇಕು‘ ಎಂದಿದೆ.</p>.<p>‘ಮುಂಗಾರು ಹಂಗಾಮನ್ನು ದೃಷ್ಟಿಯಲ್ಲಿರಿಸಿಕೊಂಡು, ರಸ್ತೆ ನಿರ್ವಹಣೆ ಘಟಕ ಮತ್ತು ಎಲೆಕ್ಟ್ರಿಕಲ್ ಘಟಕಗಳ ನಿರ್ವಹಣಾ ಕೊಠಡಿ, ತ್ಯಾಜ್ಯ ನೀರು ಎತ್ತುವ ಪಂಪ್ ಹೌಸ್ಗಳು ಸೇರಿದಂತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ರಜೆ ತೆಗೆದುಕೊಳ್ಳಲು ಅನುಮತಿ ಇಲ್ಲ‘ ಎಂದು ಆದೇಶದಲ್ಲಿ ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮುಂಗಾರು ಹಂಗಾಮಿನಲ್ಲಿ ರಾಷ್ಟ್ರ ರಾಜಧಾನಿಯನ್ನು ಜಲದಿಗ್ಭಂಧನದಿಂದ ಮುಕ್ತವಾಗಿಡಲು ಅಗತ್ಯ ಸಿದ್ಧತೆ ನಡೆಸುವುದಕ್ಕಾಗಿ ಇಲಾಖೆ ಯಾವ ವಲಯದ ಸಿಬ್ಬಂದಿಯೂ ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಲೋಕೋಪಯೋಗಿ (ಪಿಡಬ್ಲ್ಯೂಡಿ) ಇಲಾಖೆ ಪ್ರಕಟಿಸಿದೆ.</p>.<p>ದೆಹಲಿ ಸರ್ಕಾರದ ಪಿಡಬ್ಲ್ಯೂಡಿ ಕಚೇರಿ ಹೊರಡಿಸಿರುವ ಆದೇಶದ ಅನ್ವಯ, ‘ತುಂಬಾ ತುರ್ತು ಪರಿಸ್ಥಿತಿ ಅಥವಾ ಕೆಲವೊಂದು ಅನಿವಾರ್ಯ ಪ್ರಸಂಗಗಳಲ್ಲಿ ರಜೆ ತೆಗೆದುಕೊಳ್ಳಬೇಕಾದರೆ, ಮುಖ್ಯ ಎಂಜಿನಿಯರ್ ಅವರಿಂದ ಮೊದಲೇ ಅನುಮತಿ ಪಡೆದಿರಬೇಕು‘ ಎಂದಿದೆ.</p>.<p>‘ಮುಂಗಾರು ಹಂಗಾಮನ್ನು ದೃಷ್ಟಿಯಲ್ಲಿರಿಸಿಕೊಂಡು, ರಸ್ತೆ ನಿರ್ವಹಣೆ ಘಟಕ ಮತ್ತು ಎಲೆಕ್ಟ್ರಿಕಲ್ ಘಟಕಗಳ ನಿರ್ವಹಣಾ ಕೊಠಡಿ, ತ್ಯಾಜ್ಯ ನೀರು ಎತ್ತುವ ಪಂಪ್ ಹೌಸ್ಗಳು ಸೇರಿದಂತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ರಜೆ ತೆಗೆದುಕೊಳ್ಳಲು ಅನುಮತಿ ಇಲ್ಲ‘ ಎಂದು ಆದೇಶದಲ್ಲಿ ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>