ನಿರ್ಮಿತಿ ಕೇಂದ್ರವು ಬಹುವಲಯ ಅಭಿವೃದ್ಧಿ ಯೋಜನೆಯಡಿ(ಎಂಎಸ್ಡಿಪಿ) ಈ ಕಟ್ಟಡವನ್ನು ₹1.2 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ‘ಎಂಎಸ್ಡಿಪಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಗೊಂಡ ಯೋಜನೆಯಾಗಿದೆ. ಇದರಲ್ಲಿ ಶೇ 60 ಕೇಂದ್ರದ ಅನುದಾನ ಹಾಗೂ ಉಳಿದ ಶೇ 40 ರಾಜ್ಯದ ಅನುದಾನವಿದೆ. ಹೀಗಾಗಿ ರಾಜ್ಯ ಸರ್ಕಾರದ ಅನುಮತಿ ಪಡೆದೇ ಈ ಕಾರ್ಯಕ್ರಮವನ್ನು ಆಯೋಜಿಸಬೇಕಿತ್ತು’ ಎಂದು ಕಲ್ಪೆಟ್ಟ ಶಾಸಕ, ಸಿಪಿಐಎಂ ನಾಯಕ ಸಿ.ಕೆ ಶಶೀಂದ್ರನ್ ತಿಳಿಸಿದರು.