‘ನಮ್ಮಲ್ಲಿ ಪ್ರಜಾಪ್ರಭುತ್ವ ತುಂಬಾ ಇದೆ. ಹಾಗಾಗಿ ಭಾರತದಲ್ಲಿ ಸುಧಾರಣೆ ತರಲು ಬಹಳ ಕಷ್ಟವಿದೆ. ಗಣಿಗಾರಿಕೆ, ಕೃಷಿ, ಕಲ್ಲಿದ್ದಲ್ಲು ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತರಲು ರಾಜಕೀಯ ಇಚ್ಛಾಶಕ್ತಿ ಕೂಡ ಬೇಕು’ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರು ಮಂಗಳವಾರ ನಡೆದ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.