ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಭಾಗಶಃ ಕರ್ಫ್ಯೂ, ಪ್ರಯಾಣ ನಿರ್ಬಂಧಗಳು, ಅಂಗಡಿಗಳನ್ನು ಮುಚ್ಚಿಸುವುದು ಮತ್ತು ಲಾಕ್ಡೌನ್ನಂತಹ ಕ್ರಮಗಳ ಮೊರೆ ಹೋಗುತ್ತಿವೆ. ಇದರಿಂದ ಬಡವರ ಆರ್ಥಿಕ ಚಟುವಟಿಕೆ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆದ್ದರಿಂದ ಲಾಕ್ಡೌನ್ ಘೋಷಿಸಿ, ದುರ್ಬಲ ವರ್ಗದವರು, ಬಡವರಿಗೆ ಮಾಸಿಕ ಆದಾಯ ಒದಗಿಸಬೇಕಿದೆ‘ ಎಂದು ಅವರು ಪ್ರತಿಪಾದಿಸಿದ್ದಾರೆ.