ಸಂಸದೀಯ ಸಮಿತಿ ಸಭೆಗಳಲ್ಲಿ ಮುಕ್ತವಾಗಿ ಮಾತನಾಡುವ ಸಂಸದರ ಹಕ್ಕು ರಕ್ಷಿಸುವಂತೆಯೂ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ. ‘ನಿಗದಿತ ವಿಷಯದ ಚರ್ಚೆಯಿಂದ ವಿಷಯಾಂತರವಾದಾಗ ಅದನ್ನು ಸಭೆಗೆ ತಿಳಿಸುವುದು ಸದಸ್ಯರೊಬ್ಬರ ಹಕ್ಕು. ಸಮಿತಿಯ ಅಧ್ಯಕ್ಷರು ಸದಸ್ಯರೊಬ್ಬರಿಗೆ ಮಾತನಾಡಲು ಅವಕಾಶವನ್ನೇ ನೀಡುವುದಿಲ್ಲ ಎಂಬುವುದು, ಸೇನಾ ವ್ಯವಹಾರಗಳನ್ನು ಸರ್ಕಾರವು ಹೇಗೆ ನಿರ್ವಹಿಸುತ್ತಿದೆ ಎನ್ನುವುದಕ್ಕೆ ಸಾಕ್ಷ್ಯ’ ಎಂದು ಪತ್ರದಲ್ಲಿ ರಾಹುಲ್ ಉಲ್ಲೇಖಿಸಿದ್ದಾರೆ.