ಈ ಬಾರಿ ಮುಂಗಾರು ಮಾರುತಗಳ ಹಿಂದೆ ಸರಿಯುವಿಕೆ ಪ್ರಕ್ರಿಯೆಯು ವಿಳಂಬವಾಗಿತ್ತು. ಮುಂಗಾರು ಮಾರುತಗಳು ದೇಶದ ವಿವಿಧ ಭಾಗಗಳಲ್ಲಿ ಸಕ್ರಿಯವಾಗಿದ್ದ ಕಾರಣ ಹಲವೆಡೆ ಮಳೆಯೂ ಆಗಿದೆ. ಪ್ರಸ್ತುತ ಮುಂಗಾರು ಮಾರುತವು ಕೊಹಿಮಾ, ಸಿಲ್ಚಾರ್, ಕೃಷ್ಣನಗರ, ಬರಿಪಾಡ, ಮಲ್ಕನ್ಗಿರಿ, ನಲ್ಗೊಂಡ ಪ್ರದೇಶವನ್ನು ಹಾದು ಸಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.