<figcaption>""</figcaption>.<p><strong>ಜೈಪುರ:</strong> ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಅರ್ಚಕನ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕುಟುಂಬವೀಗ ದೇವಸ್ಥಾನದ ಜಾಗವನ್ನು ಆಕ್ರಮಿಸಿಕೊಳ್ಳಲು ಮುಂದಾಗಿದ್ದ ದುಷ್ಕರ್ಮಿಗಳಿಂದ ಸಜೀವ ದಹನಕ್ಕೊಳಗಾಗಿದ್ದ ಅರ್ಚಕನ ಅಂತ್ಯ ಸಂಸ್ಕಾರವನ್ನು ಶನಿವಾರ ನೆರವೇರಿಸಿದೆ.</p>.<p>ಅಪರಾಧಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಮತ್ತು ಇನ್ನೂ ಮೂವರನ್ನು ಎಫ್ಐಆರ್ನಲ್ಲಿ ಹೆಸರಿಸಲಾಗಿದೆ.</p>.<p>ಪರಿಹಾರವಾಗಿ ರಾಜ್ಯ ಸರ್ಕಾರವು ₹ 50 ಲಕ್ಷ ನೀಡಬೇಕು ಮತ್ತು ಸರ್ಕಾರಿ ಉದ್ಯೋಗವನ್ನು ಒದಗಿಸಬೇಕು ಸೇರಿದಂತೆ ತಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೆ ಅಂತ್ಯ ಸಂಸ್ಕಾರ ನಡೆಸುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದರು.</p>.<p>'ಘಟನೆಗೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಮತ್ತು ಪಟ್ವಾರಿ (ಕಂದಾಯ ಅಧಿಕಾರಿ) ಮತ್ತು ಆರೋಪಿಗಳನ್ನು ಬೆಂಬಲಿಸುತ್ತಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮಗೆ ರಕ್ಷಣೆ ಬೇಕು' ಎಂದು ಅರ್ಚಕರ ಸಂಬಂಧಿ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.</p>.<p>ಕರೌಲಿ ಜಿಲ್ಲೆಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಓಂ ಪ್ರಕಾಶ್ ಮೀನಾ ಅವರು ಗ್ರಾಮಕ್ಕೆ ಭೇಟಿ ನೀಡಿ, ಅರ್ಚಕರು ಮೃತಪಟ್ಟು ಎರಡು ದಿನ ಕಳೆದಿರುವುದರಿಂದಾಗಿ ಅಂತ್ಯಕ್ರಿಯೆ ನಡೆಸುವಂತೆ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದರು.</p>.<p>ಜೈಪುರ ಸಂಸದ ರಾಮ್ಚರಣ್ ಬೊಹ್ರಾ ನೇತೃತ್ವದ ಬಿಜೆಪಿ ನಿಯೋಗವೂ ಇಂದು ಅರ್ಚಕರ ಕುಟುಂಬವನ್ನು ಭೇಟಿಯಾಗಿ, ಅವರ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿತು.</p>.<p><strong>ಏನಿದು ಭೂ ವಿವಾದ?</strong></p>.<p>ಕರೌಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ರಾಧಾ ಕೃಷ್ಣ ದೇವಾಲಯದ ಟ್ರಸ್ಟ್ಗೆ ಸೇರಿದ ಸುಮಾರು ಹದಿಮೂರು ಬಿಘಾಸ್ (ಸುಮಾರು 5.2 ಎಕರೆ) ಭೂಮಿಯು ಇತ್ತು. ಆದರೆ ಅದನ್ನು ಮುಖ್ಯ ಅರ್ಚಕರಿಗೆ ಆದಾಯದ ಮೂಲವಾಗಿ ನೀಡಲಾಗಿತ್ತು.</p>.<p>ಸಣ್ಣ ಗುಡ್ಡವೊಂದರಗಡಿಯಲ್ಲಿರುವ ತನ್ನ ಜಮೀನಿಗೆ ಸಮೀಪವೇ ಇದ್ದ ಟ್ರಸ್ಟ್ನ ಜಮೀನಿನಲ್ಲಿ ಬಾಬು ಲಾಲ್ ತನಗಾಗಿ ಮನೆಯನ್ನು ನಿರ್ಮಿಸಲು ಬಯಸಿದ್ದರು. ನಿರ್ಮಾಣವನ್ನು ಪ್ರಾರಂಭಿಸುವ ಸಲುವಾಗಿ, ಭೂಮಿಯನ್ನು ಸಮತಟ್ಟು ಮಾಡಿಸಿದ್ದರು. ಆದರೆ ಪ್ರಬಲ ಮೀನಾ ಸಮುದಾಯದ ಜನರ ಗುಂಪು ಇದನ್ನು ಆಕ್ಷೇಪಿಸಿ, ಆ ಭೂಮಿಯು ತಮ್ಮದೆಂದು ಹೇಳಿದೆ.</p>.<p>ಈ ವಿವಾದವನ್ನು ಗ್ರಾಮದ ಹಿರಿಯರ ಬಳಿ ಕೊಂಡೊಯ್ದಾಗ ಅವರು ಅರ್ಚಕರ ಪರವಾಗಿಯೇ ತೀರ್ಪು ನೀಡಿದ್ದರು. ಆದರೆ ಆರೋಪಿಗಳು ಅರ್ಚಕರು ಸಮತಟ್ಟು ಮಾಡಿದ್ದ ಜಾಗದಲ್ಲಿಯೇ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಇದು ವಾಗ್ವಾದಕ್ಕೆ ಕಾರಣವಾಗಿದೆ.</p>.<p>ವಿವಾದಿತ ಸ್ಥಳದಲ್ಲಿದ್ದ ಬಾಜ್ರಾಗೆ (ರಾಗಿ) ಆರು ಜನರ ತಂಡವೊಂದು ಪೆಟ್ರೋಲ್ ಸುರಿದು ಬುಧವಾರ ಬೆಂಕಿ ಹಚ್ಚಿದ್ದಾರೆ. ಬಳಿಕ ತನ್ನ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು ಎಂದು ಅರ್ಚಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಜೈಪುರ:</strong> ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಅರ್ಚಕನ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕುಟುಂಬವೀಗ ದೇವಸ್ಥಾನದ ಜಾಗವನ್ನು ಆಕ್ರಮಿಸಿಕೊಳ್ಳಲು ಮುಂದಾಗಿದ್ದ ದುಷ್ಕರ್ಮಿಗಳಿಂದ ಸಜೀವ ದಹನಕ್ಕೊಳಗಾಗಿದ್ದ ಅರ್ಚಕನ ಅಂತ್ಯ ಸಂಸ್ಕಾರವನ್ನು ಶನಿವಾರ ನೆರವೇರಿಸಿದೆ.</p>.<p>ಅಪರಾಧಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಮತ್ತು ಇನ್ನೂ ಮೂವರನ್ನು ಎಫ್ಐಆರ್ನಲ್ಲಿ ಹೆಸರಿಸಲಾಗಿದೆ.</p>.<p>ಪರಿಹಾರವಾಗಿ ರಾಜ್ಯ ಸರ್ಕಾರವು ₹ 50 ಲಕ್ಷ ನೀಡಬೇಕು ಮತ್ತು ಸರ್ಕಾರಿ ಉದ್ಯೋಗವನ್ನು ಒದಗಿಸಬೇಕು ಸೇರಿದಂತೆ ತಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೆ ಅಂತ್ಯ ಸಂಸ್ಕಾರ ನಡೆಸುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದರು.</p>.<p>'ಘಟನೆಗೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಮತ್ತು ಪಟ್ವಾರಿ (ಕಂದಾಯ ಅಧಿಕಾರಿ) ಮತ್ತು ಆರೋಪಿಗಳನ್ನು ಬೆಂಬಲಿಸುತ್ತಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮಗೆ ರಕ್ಷಣೆ ಬೇಕು' ಎಂದು ಅರ್ಚಕರ ಸಂಬಂಧಿ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.</p>.<p>ಕರೌಲಿ ಜಿಲ್ಲೆಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಓಂ ಪ್ರಕಾಶ್ ಮೀನಾ ಅವರು ಗ್ರಾಮಕ್ಕೆ ಭೇಟಿ ನೀಡಿ, ಅರ್ಚಕರು ಮೃತಪಟ್ಟು ಎರಡು ದಿನ ಕಳೆದಿರುವುದರಿಂದಾಗಿ ಅಂತ್ಯಕ್ರಿಯೆ ನಡೆಸುವಂತೆ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದರು.</p>.<p>ಜೈಪುರ ಸಂಸದ ರಾಮ್ಚರಣ್ ಬೊಹ್ರಾ ನೇತೃತ್ವದ ಬಿಜೆಪಿ ನಿಯೋಗವೂ ಇಂದು ಅರ್ಚಕರ ಕುಟುಂಬವನ್ನು ಭೇಟಿಯಾಗಿ, ಅವರ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿತು.</p>.<p><strong>ಏನಿದು ಭೂ ವಿವಾದ?</strong></p>.<p>ಕರೌಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ರಾಧಾ ಕೃಷ್ಣ ದೇವಾಲಯದ ಟ್ರಸ್ಟ್ಗೆ ಸೇರಿದ ಸುಮಾರು ಹದಿಮೂರು ಬಿಘಾಸ್ (ಸುಮಾರು 5.2 ಎಕರೆ) ಭೂಮಿಯು ಇತ್ತು. ಆದರೆ ಅದನ್ನು ಮುಖ್ಯ ಅರ್ಚಕರಿಗೆ ಆದಾಯದ ಮೂಲವಾಗಿ ನೀಡಲಾಗಿತ್ತು.</p>.<p>ಸಣ್ಣ ಗುಡ್ಡವೊಂದರಗಡಿಯಲ್ಲಿರುವ ತನ್ನ ಜಮೀನಿಗೆ ಸಮೀಪವೇ ಇದ್ದ ಟ್ರಸ್ಟ್ನ ಜಮೀನಿನಲ್ಲಿ ಬಾಬು ಲಾಲ್ ತನಗಾಗಿ ಮನೆಯನ್ನು ನಿರ್ಮಿಸಲು ಬಯಸಿದ್ದರು. ನಿರ್ಮಾಣವನ್ನು ಪ್ರಾರಂಭಿಸುವ ಸಲುವಾಗಿ, ಭೂಮಿಯನ್ನು ಸಮತಟ್ಟು ಮಾಡಿಸಿದ್ದರು. ಆದರೆ ಪ್ರಬಲ ಮೀನಾ ಸಮುದಾಯದ ಜನರ ಗುಂಪು ಇದನ್ನು ಆಕ್ಷೇಪಿಸಿ, ಆ ಭೂಮಿಯು ತಮ್ಮದೆಂದು ಹೇಳಿದೆ.</p>.<p>ಈ ವಿವಾದವನ್ನು ಗ್ರಾಮದ ಹಿರಿಯರ ಬಳಿ ಕೊಂಡೊಯ್ದಾಗ ಅವರು ಅರ್ಚಕರ ಪರವಾಗಿಯೇ ತೀರ್ಪು ನೀಡಿದ್ದರು. ಆದರೆ ಆರೋಪಿಗಳು ಅರ್ಚಕರು ಸಮತಟ್ಟು ಮಾಡಿದ್ದ ಜಾಗದಲ್ಲಿಯೇ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಇದು ವಾಗ್ವಾದಕ್ಕೆ ಕಾರಣವಾಗಿದೆ.</p>.<p>ವಿವಾದಿತ ಸ್ಥಳದಲ್ಲಿದ್ದ ಬಾಜ್ರಾಗೆ (ರಾಗಿ) ಆರು ಜನರ ತಂಡವೊಂದು ಪೆಟ್ರೋಲ್ ಸುರಿದು ಬುಧವಾರ ಬೆಂಕಿ ಹಚ್ಚಿದ್ದಾರೆ. ಬಳಿಕ ತನ್ನ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು ಎಂದು ಅರ್ಚಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>