ನವದೆಹಲಿ: ಆಧುನಿಕ ಭಾರತ ನಿರ್ಮಾಣಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ದೂರದರ್ಶಿ ಚಿಂತನೆಗಳು, ನೀತಿಗಳೇ ಕಾರಣ ಎಂದು ಅವರ ಪುತ್ರ, ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಹೇಳಿದ್ದಾರೆ.
ರಾಜೀವ್ ಗಾಂಧಿ ಅವರ 77ನೇ ಜನ್ಮದಿನ ನಿಮಿತ್ತ ಇಲ್ಲಿನ ಅವರ ಸ್ಮಾರಕ ‘ವೀರ ಭೂಮಿ’ಗೆ ತೆರಳಿ ರಾಹುಲ್ ಪುಷ್ಪಗುಚ್ಛ ಅರ್ಪಿಸಿದರು.
‘ಅವರೊಬ್ಬ ಅದ್ಭುತ ವ್ಯಕ್ತಿ. ಕರುಣಾಮಯಿ ಮತ್ತು ಪ್ರೀತಿಪಾತ್ರ ವ್ಯಕ್ತಿತ್ವ.ಅವರು ಎಂದಿಗೂ ನನ್ನ ಹೃದಯದಲ್ಲಿ ನೆಲೆಸಿರುತ್ತಾರೆ. ವೀರಭೂಮಿಗೆ ತೆರಳಿ ನಮನ ಸಲ್ಲಿಸಲಾಯಿತು’ ಎಂದು ತಮ್ಮ ಫೇಸ್ಬುಕ್ ಪುಟದಲ್ಲಿ ರಾಹುಲ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.