ಪಶ್ಚಿಮದ ಗಡಿಯಲ್ಲಿ ಮಿತಿ ಮೀರಿ ವರ್ತಿಸಿದ ನೆರೆ ರಾಷ್ಟ್ರಕ್ಕೆ ನಾವು ಸ್ಪಷ್ಟ ಸಂದೇಶ ನೀಡಿದ್ದೇವೆ. ತಿರುಗೇಟು ನೀಡುವುದು ಮಾತ್ರವಲ್ಲ, ಅಗತ್ಯವಾದಲ್ಲಿ ಸರ್ಜಿಕಲ್ ಮತ್ತು ವೈಮಾನಿಕ ದಾಳಿ ನಡೆಸಲೂ ಸಿದ್ಧರಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಈ ವಿಷಯಗಳನ್ನು ಅರ್ಥ ಮಾಡಿಕೊಳ್ಳದ ಮತ್ತೊಂದು ನೆರೆ ರಾಷ್ಟ್ರವೂ ಇದೆ ಎಂದು ಚೀನಾದ ಹೆಸರು ಉಲ್ಲೇಖಿಸದೇ ರಾಜನಾಥ್ ಹೇಳಿದ್ದಾರೆ.