ನವದೆಹಲಿ: ನೂತನ ಕೃಷಿ ಮಸೂದೆಗಳ ಕುರಿತು ಚರ್ಚೆನಡೆಸುವಂತೆ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಪಟ್ಟು ಹಿಡಿದ ಕಾರಣ ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ದಿನದ ಕಲಾಪ ಆರಂಭಗೊಂಡ ನಂತರ, ಪ್ರತಿಪಕ್ಷಗಳಿಂದ ಗದ್ದಲ ಶುರುವಾದಾಗ ಬೆಳಿಗ್ಗೆ 10.30ರವರೆಗೆ ಮುಂದೂಡಲಾಯಿತು. ನಂತರದಲ್ಲಿ 11.30ರವರೆಗೆ ಕಲಾಪವನ್ನು ಮುಂದೂಡಲಾಯಿತು. ಮತ್ತೆ ಕಲಾಪ ಆರಂಭಗೊಂಡರೂ, ವಿಪಕ್ಷಗಳು ಪಟ್ಟು ಸಡಿಲಿಸದ ಕಾರಣ ಸದನವನ್ನು ಮತ್ತೆ ಮಧ್ಯಾಹ್ನ 12.30 ರವರೆಗೆ ಮುಂದೂಡಲಾಯಿತು.
ಮಧ್ಯಾಹ್ನ 12.30ಕ್ಕೆ ಸದನದ ಕಲಾಪ ಪುನಃ ಆರಂಭಗೊಂಡಿತು. ಆಗ, ವಿರೋಧ ಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಉಪಸಭಾಪತಿ ಹರಿವಂಶ್ ಅವರ ಪೀಠದ ಮುಂದೆ ಸೇರಿದರು. ಆಗ, ಅವರು ದಿನದ ಮಟ್ಟಿಗೆ ಸದನವನ್ನು ಮುಂದೂಡಿ ರೂಲಿಂಗ್ ನೀಡಿದರು.