ನಿಯಮದ ಪ್ರಕಾರ, ಸದನದ ಸದಸ್ಯರಲ್ಲದ, ಅನ್ಯ ಸದನದ ಸದಸ್ಯರ ವಿರುದ್ಧ ಗಂಭೀರ ಹೇಳಿಕೆ ನೀಡುವಂತಿಲ್ಲ ಎಂದು ಹೇಳಿರುವ ಖರ್ಗೆ, ಪೂರಕವಾಗಿ ರಾಜ್ಯಸಭೆಯ ಮಾಜಿ ಸಭಾಪತಿ ಆರ್.ವೆಂಕಟರಾಮನ್ 1987ರಲ್ಲಿ ನೀಡಿದ್ದ ರೂಲಿಂಗ್ ಉಲ್ಲೇಖಿಸಿದ್ದಾರೆ. ಬೇರೊಂದು ಸದನದ ಸದಸ್ಯರ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.