ನವದೆಹಲಿಯಲ್ಲಿಮಾಧ್ಯಮದವರೊಂದಿಗೆ ಮಾತನಾಡಿರುವ ರಾಂಧವ,ಈ ವಿಚಾರವಾಗಿ ಇದುವರೆಗೆ ಯಾವುದೇ ತನಿಖೆ ನಡೆದಿಲ್ಲ. ಅವರು (ಅಮರಿಂದರ್ ಸಿಂಗ್) ಇದನ್ನು ತಪ್ಪಾಗಿತೆಗೆದುಕೊಳ್ಳುತ್ತಾರೆ. ಅವರಲ್ಲಿನ ಭಯ ಅದಕ್ಕೆ ಕಾರಣವೆಂದು ನನಗನಿಸುತ್ತದೆ. ಅಮರಿಂದರ್ ಐಎಸ್ಐ ಎಂಜೆಂಟ್ ಜೊತೆ ಸಂಪರ್ಕದಲ್ಲಿದ್ದಾರೆಯೇ ಎಂದು ನಾನು ಇತ್ತೀಚೆಗೆ ಪ್ರಶ್ನಿಸಿದ್ದೆ. ಹಾಗೇನಾದರೂ ಇದ್ದರೆ ಆ ಬಗ್ಗೆ ಗಮನ ಹರಿಸಲಾಗುವುದು ಎಂದೂ ಹೇಳಿದ್ದೆʼ ಎಂದಿದ್ದಾರೆ.