‘ಇದು ಬಿಜೆಪಿ ಮತ್ತು ಕಾಂಗ್ರೆಸ್-ಎಐಯುಡಿಎಫ್ ನಡುವಣ ಪೈಪೋಟಿಯಷ್ಟೇ ಅಲ್ಲ. ಮೋದಿ ಮತ್ತು ಅಜ್ಮಲ್ ಅವರು ಪ್ರತಿನಿಧಿಸುತ್ತಿರುವ ಸಿದ್ಧಾಂತಗಳ ನಡುವಣ ಪೈಪೋಟಿ. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮದರಸಾಗಳನ್ನು ತೆರೆಯುತ್ತೇವೆ ಎಂದು ಅಜ್ಮಲ್ ಹೇಳುತ್ತಿದ್ದಾರೆ. ಆದರೆ, ನಮಗೆ ಇನ್ನಷ್ಟು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಅಗತ್ಯವಿದೆ ಎಂದು ಮೋದಿ ಅವರು ಹೇಳುತ್ತಾರೆ. ಅಜ್ಮಲ್ ಅವರು ಕೆಲವು ಮೊಹಲ್ಲಾಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆಯೇ ಹೊರತು ವೈದ್ಯರು ಅಥವಾ ಎಂಜಿನಿಯರ್ಗಳನ್ನಲ್ಲ. ಅಧಿಕಾರಕ್ಕೆ ಬಂದರೆ ಹೆಚ್ಚು ಮಕ್ಕಳಿಗೆ ಜನ್ಮ ನೀಡುವಂತೆ ಮಹಿಳೆಯರನ್ನು ಪ್ರೇರೇಪಿಸಲಾಗುವುದು ಎಂದು ಅಜ್ಮಲ್ ಹೇಳುತ್ತಾರೆ. ನಮ್ಮ ಸಮಾಜ ಎತ್ತ ಸಾಗುತ್ತಿದೆ ಮತ್ತು ಅವರು ಅಧಿಕಾರಕ್ಕೆ ಬಂದರೆ ಜನರ ಹಾಗೂ ಯುವಕರ ಕತೆ ಏನಾಗಲಿದೆ ಎಂಬುದನ್ನು ಊಹಿಸಿಕೊಳ್ಳಿ’ ಎಂದು ಶರ್ಮ ಹೇಳಿದ್ದಾರೆ.