ಮುಜಾಫರ್ನಗರ(ಉತ್ತರ ಪ್ರದೇಶ): ಇತ್ತೀಚೆಗೆ ಕರ್ನಾಲ್ನಲ್ಲಿ ರೈತರ ಮೇಲೆ ನಡೆದ ಲಾಠಿ ಪ್ರಹಾರವನ್ನು ಖಂಡಿಸಿ ಸೋಮವಾರ ರಾಷ್ಟ್ರೀಯ ಲೋಕದಳದ(ಆರ್ಎಲ್ಡಿ) ಹಲವು ಕಾರ್ಯಕರ್ತರು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ಪಿನ್ನಾ ಗ್ರಾಮದಲ್ಲಿ ಪ್ರತಿಭಟಿಸಿದ ಪಕ್ಷದ ಕಾರ್ಯಕರ್ತರು ಹರಿಯಾಣ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಹರಿಯಾಣದಲ್ಲಿ ಬಿಜೆಪಿ ಸಭೆಯ ವಿರುದ್ಧ ಪ್ರತಿಭಟಿಸಲು ಕರ್ನಾಲ್ ಕಡೆಗೆ ಹೊರಟಿದ್ದ ರೈತರ ಮೇಲೆ ಪೊಲೀಸರು ಶನಿವಾರ ಲಾಠಿಚಾರ್ಚ್ ನಡೆಸಿದ್ದರು. ಇದರಲ್ಲಿ 10 ಮಂದಿಗೆ ಗಾಯಗಳಾಗಿತ್ತು ಎಂದು ಹೇಳಲಾಗಿದೆ.
ಈ ವೇಳೆ ಕೇವಲ ನಾಲ್ಕು ಪ್ರತಿಭಟನಕಾರರಿಗೆ ಗಾಯಗಳಾಗಿವೆ. ಆದರೆ 10 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಹರಿಯಾಣ ಪೊಲೀಸರ ನಡೆಯನ್ನು ಖಂಡಿಸಿ ರಸ್ತೆ, ಹೆದ್ದಾರಿ ಸೇರಿದಂತೆ ಟೋಲ್ ಪ್ಲಾಜಾವನ್ನು ತಡೆದು ಈಚೆಗೆ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು.