‘ಈ ವಿವಾದಾತ್ಮಕ ತಂತ್ರಜ್ಞಾನದ ಪ್ರಯೋಗಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಆರು ರಾಜ್ಯಗಳಿಗೆ ಪರಿಸರ ಇಲಾಖೆ ಸೂಚಿಸಿದೆ.ಆತ್ಮನಿರ್ಭರ ಅಭಿಯಾನಕ್ಕೆ ಈ ಯೋಜನೆ ವಿರುದ್ಧವಾಗಿದೆ. ಈ ಅಭಿಯಾನ ಯಶಸ್ವಿ ಆಗದೇ ಇರಲು ಈ ಪ್ರಯೋಗಕ್ಕೆ ಒಪ್ಪಿಗೆ ನೀಡಿದಂತಿದೆ. ಬಿ.ಟಿ ಬದನೆಕಾಯಿ ತಂತ್ರಜ್ಞಾನ ದೇಶಕ್ಕೆ ಅಗತ್ಯವಿಲ್ಲ. ಬದನೆಕಾಯಿ ಕೃಷಿಯಲ್ಲಿ ರಾಸಾಯನಿಕಗಳು ಅಥವಾ ಇತರೆ ಜೈವಿಕ ತಂತ್ರಜ್ಞಾನವಿಲ್ಲದೇ ಕೀಟಗಳನ್ನು ನಿಯಂತ್ರಿಸಬಹುದು. ಶೀಘ್ರದಲ್ಲೇ ತಾವು ಖುದ್ದಾಗಿ ಈ ಪ್ರಯೋಗವನ್ನು ನಿಲ್ಲಿಸಲು ಸೂಚನೆ ನೀಡಬೇಕು’ ಎಂದು ಎಸ್ಜೆಎಂ ಪತ್ರದಲ್ಲಿ ಮನವಿ ಮಾಡಿದೆ.