<p class="title"><strong>ನವದೆಹಲಿ:</strong> ಬಜೆಟ್ ವಿವರಗಳ ಸೋರಿಕೆಗೆ ಸಂಬಂಧಿಸಿ ಹಣಕಾಸು ಸಚಿವರ ವಿರುದ್ಧ ನೀಡಿದ ಹಕ್ಕುಚ್ಯುತಿ ನೋಟಿಸ್ ದೆಹಲಿ ವಿಧಾನಸಭೆಯಲ್ಲಿ ಮಂಗಳವಾರ ಆಡಳಿತಾರೂಢ ಎಎಪಿ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ಕೋಲಾಹಲವನ್ನುಂಟು ಮಾಡಿತು.</p>.<p class="title">ಹಣಕಾಸು ಸಚಿವ ಕೈಲಾಶ್ ಗೆಹಲೋತ್ ಅವರ ಭಾಷಣದ ಹಿಂದೆಯೇ ಎಎಪಿ ಸದಸ್ಯರು ಅಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದ್ದು, ಕಲಾಪವನ್ನು ಬೆಳಿಗ್ಗೆ ಒಮ್ಮೆ ಮುಂದೂಡಲಾಯಿತು. ಸದನ ಮತ್ತೆ ಸೇರಿದಾಗ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಅವರು ಹಕ್ಕುಚ್ಯುತಿ ನೋಟಿಸ್ ನೀಡಲು ಮುಂದಾದರು. </p>.<p class="bodytext">‘ನಿಯಮಾನುಸಾರ ಇಂತಹ ನೋಟಿಸ್ ಅನ್ನು ಮೂರು ಗಂಟೆ ಮೊದಲು ನೀಡಬೇಕು. ಈಗಲೇ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುವುದರ ಹಿಂದೆ ಸದನದ ಸಮಯ ವ್ಯರ್ಥ ಮಾಡುವ ಗುರಿ ಇದ್ದಂತಿದೆ’ ಎಂದು ಸ್ಪೀಕರ್ ರಾಮ್ ನಿವಾಸ್ ಗೋಯಲ್ ಆಕ್ಷೇಪಿಸಿದರು.</p>.<p class="bodytext">‘ಸೋಮವಾರ ಮಂಡಿಸಲಾದ ಬಜೆಟ್ನ ಮಾಹಿತಿ ಸೋರಿಕೆ ಕುರಿತು ಈಗ ನೋಟಿಸ್ ನೀಡಿದ್ದೀರಿ’ ಎಂದು ಹೇಳಿದ ಸ್ಪೀಕರ್, ಗುಪ್ತಾ ಅವರಿಗೆ ಕಟ್ಟೆಚ್ಚರ ನೀಡಿದರು.</p>.<p class="bodytext">‘ಸದಸ್ಯರು ಸದನದಲ್ಲಿ ಮಾತನಾಡಿದ್ದಕ್ಕೂ, ನೋಟಿಸ್ನಲ್ಲಿ ಉಲ್ಲೇಖಿಸಿರುವುದಕ್ಕು ವ್ಯತ್ಯಾಸಗಳಿವೆ. ಈ ವಿಷಯವನ್ನು ನೀತಿ ಸಂಹಿತೆ ಸಮಿತಿಯ ವಿವೇಚನೆಗೆ ಒಪ್ಪಿಸಬೇಕು’ ಎಂದು ಸರ್ಕಾರದ ಮುಖ್ಯ ಸಚೇತಕ ದಿಲೀಪ್ ಪಾಂಡೆ ಸಲಹೆ ಮಾಡಿದರು.</p>.<p>ಅಂತಿಮವಾಗಿ ಈ ವಿಷಯವೇ ಬಿಜೆಪಿ ಮತ್ತು ಎಎಪಿ ಸದಸ್ಯರ ನಡುವೆ ಪರಸ್ಪರ ವಾಗ್ದಾಳಿಗೆ ನಾಂದಿಯಾಗಿ ಗೊಂದಲದ ಸ್ಥಿತಿ ನಿರ್ಮಿಸಿತು. ಹೀಗಾಗಿ, ಸ್ಪೀಕರ್ ಮತ್ತೆ ಕಲಾಪವನ್ನು ಮುಂದೂಡಿದರು.</p>.<p>ಈ ಕುರಿತ ಟ್ವೀಟ್ನಲ್ಲಿ ಗುಪ್ತಾ ಅವರು, ‘ಬಜೆಟ್ ಮಾಹಿತಿ ಸೋರಿಕೆ ಕುರಿತು ಹಣಕಾಸು ಸಚಿವ ಕೈಲಾಶ್ ಗೆಹಲೋತ್ ಮತ್ತು ಸಚಿವ ಗೋಪಾಲ್ ರೈ ವಿರುದ್ಧ ಹಕ್ಕುಚ್ಯುತಿ ಮಂಡಿಸಿದೆ. ಕ್ರಮಕೈಗೊಳ್ಳುವ ಬದಲು, ಮಾರ್ಷಲ್ ಮೂಲಕ ನನ್ನನ್ನೇ ಹೊರಕಳುಹಿಸಲಾಯಿತು’ ಎಂದು ಟೀಕಿಸಿದ್ದಾರೆ.</p>.<p>ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರೋಧಪಕ್ಷದ ನಾಯಕ ರಾಮ್ವೀರ್ ಸಿಂಗ್ ಬಿಧೂರಿ ಅವರು, ಈ ಬೆಳವಣಿಗೆಗೆ ಸಂಬಂಧಿಸಿ ಹಣಕಾಸು ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ಬಜೆಟ್ ವಿವರಗಳ ಸೋರಿಕೆಗೆ ಸಂಬಂಧಿಸಿ ಹಣಕಾಸು ಸಚಿವರ ವಿರುದ್ಧ ನೀಡಿದ ಹಕ್ಕುಚ್ಯುತಿ ನೋಟಿಸ್ ದೆಹಲಿ ವಿಧಾನಸಭೆಯಲ್ಲಿ ಮಂಗಳವಾರ ಆಡಳಿತಾರೂಢ ಎಎಪಿ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ಕೋಲಾಹಲವನ್ನುಂಟು ಮಾಡಿತು.</p>.<p class="title">ಹಣಕಾಸು ಸಚಿವ ಕೈಲಾಶ್ ಗೆಹಲೋತ್ ಅವರ ಭಾಷಣದ ಹಿಂದೆಯೇ ಎಎಪಿ ಸದಸ್ಯರು ಅಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದ್ದು, ಕಲಾಪವನ್ನು ಬೆಳಿಗ್ಗೆ ಒಮ್ಮೆ ಮುಂದೂಡಲಾಯಿತು. ಸದನ ಮತ್ತೆ ಸೇರಿದಾಗ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಅವರು ಹಕ್ಕುಚ್ಯುತಿ ನೋಟಿಸ್ ನೀಡಲು ಮುಂದಾದರು. </p>.<p class="bodytext">‘ನಿಯಮಾನುಸಾರ ಇಂತಹ ನೋಟಿಸ್ ಅನ್ನು ಮೂರು ಗಂಟೆ ಮೊದಲು ನೀಡಬೇಕು. ಈಗಲೇ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುವುದರ ಹಿಂದೆ ಸದನದ ಸಮಯ ವ್ಯರ್ಥ ಮಾಡುವ ಗುರಿ ಇದ್ದಂತಿದೆ’ ಎಂದು ಸ್ಪೀಕರ್ ರಾಮ್ ನಿವಾಸ್ ಗೋಯಲ್ ಆಕ್ಷೇಪಿಸಿದರು.</p>.<p class="bodytext">‘ಸೋಮವಾರ ಮಂಡಿಸಲಾದ ಬಜೆಟ್ನ ಮಾಹಿತಿ ಸೋರಿಕೆ ಕುರಿತು ಈಗ ನೋಟಿಸ್ ನೀಡಿದ್ದೀರಿ’ ಎಂದು ಹೇಳಿದ ಸ್ಪೀಕರ್, ಗುಪ್ತಾ ಅವರಿಗೆ ಕಟ್ಟೆಚ್ಚರ ನೀಡಿದರು.</p>.<p class="bodytext">‘ಸದಸ್ಯರು ಸದನದಲ್ಲಿ ಮಾತನಾಡಿದ್ದಕ್ಕೂ, ನೋಟಿಸ್ನಲ್ಲಿ ಉಲ್ಲೇಖಿಸಿರುವುದಕ್ಕು ವ್ಯತ್ಯಾಸಗಳಿವೆ. ಈ ವಿಷಯವನ್ನು ನೀತಿ ಸಂಹಿತೆ ಸಮಿತಿಯ ವಿವೇಚನೆಗೆ ಒಪ್ಪಿಸಬೇಕು’ ಎಂದು ಸರ್ಕಾರದ ಮುಖ್ಯ ಸಚೇತಕ ದಿಲೀಪ್ ಪಾಂಡೆ ಸಲಹೆ ಮಾಡಿದರು.</p>.<p>ಅಂತಿಮವಾಗಿ ಈ ವಿಷಯವೇ ಬಿಜೆಪಿ ಮತ್ತು ಎಎಪಿ ಸದಸ್ಯರ ನಡುವೆ ಪರಸ್ಪರ ವಾಗ್ದಾಳಿಗೆ ನಾಂದಿಯಾಗಿ ಗೊಂದಲದ ಸ್ಥಿತಿ ನಿರ್ಮಿಸಿತು. ಹೀಗಾಗಿ, ಸ್ಪೀಕರ್ ಮತ್ತೆ ಕಲಾಪವನ್ನು ಮುಂದೂಡಿದರು.</p>.<p>ಈ ಕುರಿತ ಟ್ವೀಟ್ನಲ್ಲಿ ಗುಪ್ತಾ ಅವರು, ‘ಬಜೆಟ್ ಮಾಹಿತಿ ಸೋರಿಕೆ ಕುರಿತು ಹಣಕಾಸು ಸಚಿವ ಕೈಲಾಶ್ ಗೆಹಲೋತ್ ಮತ್ತು ಸಚಿವ ಗೋಪಾಲ್ ರೈ ವಿರುದ್ಧ ಹಕ್ಕುಚ್ಯುತಿ ಮಂಡಿಸಿದೆ. ಕ್ರಮಕೈಗೊಳ್ಳುವ ಬದಲು, ಮಾರ್ಷಲ್ ಮೂಲಕ ನನ್ನನ್ನೇ ಹೊರಕಳುಹಿಸಲಾಯಿತು’ ಎಂದು ಟೀಕಿಸಿದ್ದಾರೆ.</p>.<p>ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರೋಧಪಕ್ಷದ ನಾಯಕ ರಾಮ್ವೀರ್ ಸಿಂಗ್ ಬಿಧೂರಿ ಅವರು, ಈ ಬೆಳವಣಿಗೆಗೆ ಸಂಬಂಧಿಸಿ ಹಣಕಾಸು ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>