ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ವಾಸಕ್ಕಾಗಿ ಆ ಬಂಗಲೆಯನ್ನು ನೀಡಲಾಗಿತ್ತು. ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಅವರಿದ್ದ ಪೀಠವು ಈ ನೋಟಿಸ್ಗೆ ತಡೆ ನೀಡಿತು. ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ವಕೀಲರಾದ ಅರ್ಧೇಂದು ಮೌಲಿ ಪ್ರಸಾದ್ ಹಾಗೂ ಪ್ರವೇಶ್ ಠಾಕೂರ್ ಅವರ ಮೂಲಕ ಕೋಶಿಯಾರಿ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ‘ಸಂವಿಧಾನದ 361ನೇ ವಿಧಿ ಅನ್ವಯ, ರಾಷ್ಟ್ರಪತಿ ಮತ್ತು ರಾಜ್ಯಪಾಲರ ವಿರುದ್ಧ ಇಂಥ ವಿಚಾರಣೆಗೆ ರಕ್ಷಣೆ ಇದೆ. ಆ ಬಂಗಲೆಗೆ ನಿಗದಿಪಡಿಸಿದ್ದ ಮಾರುಕಟ್ಟೆ ಬಾಡಿಗೆ ದರವು ವಿಪರೀತವಾಗಿತ್ತು’ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.