<p class="title">ನವದೆಹಲಿ (ಪಿಟಿಐ): ಮಸೀದಿಗಳ ಇಮಾಮ್ಗಳಿಗೆ ಗೌರವಧನ ನೀಡುವ ಕುರಿತ ಸುಪ್ರೀಂ ಕೋರ್ಟ್ನ 1993ರ ಆದೇಶವು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಮಾಹಿತಿ ಆಯೋಗದ ಆಯುಕ್ತರು ಹೇಳಿದ್ದಾರೆ.</p>.<p class="title">ಇದು, ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡುವ ಜೊತೆಗೆ, ರಾಜಕೀಯ ತಿಕ್ಕಾಟ ಸಾಮಾಜಿಕ ಸೌಹಾರ್ಧಕ್ಕೂ ಧಕ್ಕೆ ತರಲಿದೆ ಎಂದು ಮಾಹಿತಿ ಆಯುಕ್ತ ಉದಯ್ ಮಹುರ್ಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.</p>.<p>ದೆಹಲಿ ಸರ್ಕಾರ ಮತ್ತು ವಕ್ಫ್ಮಂಡಳಿಯು ಇಮಾಮ್ಗಳಿಗೆ ನೀಡುತ್ತಿರುವ ವೇತನದ ವಿವರ ಕೋರಿದ್ದ ಅರ್ಜಿಯ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದರು. ‘ಸಾರ್ವಜನಿಕರ ತೆರಿಗೆ ಹಣವನ್ನು ನಿರ್ದಿಷ್ಟ ಧರ್ಮದ ಪರವಾಗಿ ಬಳಸಬಾರದು ಎಂಬ ಸಂವಿಧಾನದ ಆಶಯವು ಈ ಆದೇಶದಿಂದ ಉಲ್ಲಂಘನೆಯಾಗಲಿದೆ’ ಎಂದು ಹೇಳಿದರು.</p>.<p>1993ರಲ್ಲಿ ಅಖಿಲ ಭಾರತ ಇಮಾಮ್ಗಳ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ತಾನು ನಿರ್ವಹಿಸುವ ಮಸೀದಿಗಳ ಇಮಾಮ್ಗಳಿಗೆ ಗೌರವಧನ ನೀಡಬೇಕು ಎಂದು ವಕ್ಫ್ ಮಂಡಳಿಗೆ ಆದೇಶಿಸಿತ್ತು.</p>.<p>‘ಈ ಆದೇಶದ ಪ್ರತಿಯನ್ನು ಕೇಂದ್ರ ಕಾನೂನು ಸಚಿವರಿಗೆ ಕಳುಹಿಸಬೇಕು.ಪೂಜೆ, ಪ್ರಾರ್ಥನೆ ನೆರವೇರಿಸುವ ವಿವಿಧ ಧರ್ಮದವರಿಗೆ ಗೌರವಧನ ನೀಡಲು ತೆರಿಗೆ ಹಣ ಬಳಸದಂತೆ ಕ್ರಮವಹಿಸಲು ಸಂವಿಧಾನದ 25 ರಿಂದ 28ನೇ ವಿಧಿಯ ನಿಯಮಗಳನ್ನು ಅದರ ಮೂಲ ಆಶಯಗಳೊಂದಿಗೆ ಜಾರಿಗೊಳಿಸಬೇಕು’ ಎಂದು ಸೂಚಿಸಿದರು.</p>.<p>‘ಗೌರವಧನ ನೀಡುವ ಕುರಿತಂತೆ ಸುಪ್ರೀಂ ಕೋರ್ಟ್ 1993ರಲ್ಲಿ ನೀಡಿದ್ದ ಆದೇಶವನ್ನು ಉಲ್ಲೇಖಿಸಿದ ಅವರು, ತೆರಿಗೆ ಹಣವನ್ನು ನಿರ್ದಿಷ್ಟ ಧರ್ಮದ ಪರವಾಗಿ ಬಳಸಬಾರದು ಎಂಬ ಸಂವಿಧಾನದ ವಿಧಿ 27ರ ಉಲ್ಲಂಘನೆಯಾಗಿದೆ’ ಎಂದು ಮಾಹಿತಿ ಆಯುಕ್ತರು ಅಭಿಪ್ರಾಯಪಟ್ಟರು.</p>.<p>‘ಈ ಅದೇಶವು ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡಲಿದೆ. ಅನಗತ್ಯ ರಾಜಕೀಯ ತಿಕ್ಕಾಟ ಹಾಗೂ ಸಮಾಜದಲ್ಲಿ ಸಾಮಾಜಿಕ ಸೌಹಾರ್ದ ಕದಡಲು ಕಾರಣವಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title">ನವದೆಹಲಿ (ಪಿಟಿಐ): ಮಸೀದಿಗಳ ಇಮಾಮ್ಗಳಿಗೆ ಗೌರವಧನ ನೀಡುವ ಕುರಿತ ಸುಪ್ರೀಂ ಕೋರ್ಟ್ನ 1993ರ ಆದೇಶವು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಮಾಹಿತಿ ಆಯೋಗದ ಆಯುಕ್ತರು ಹೇಳಿದ್ದಾರೆ.</p>.<p class="title">ಇದು, ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡುವ ಜೊತೆಗೆ, ರಾಜಕೀಯ ತಿಕ್ಕಾಟ ಸಾಮಾಜಿಕ ಸೌಹಾರ್ಧಕ್ಕೂ ಧಕ್ಕೆ ತರಲಿದೆ ಎಂದು ಮಾಹಿತಿ ಆಯುಕ್ತ ಉದಯ್ ಮಹುರ್ಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.</p>.<p>ದೆಹಲಿ ಸರ್ಕಾರ ಮತ್ತು ವಕ್ಫ್ಮಂಡಳಿಯು ಇಮಾಮ್ಗಳಿಗೆ ನೀಡುತ್ತಿರುವ ವೇತನದ ವಿವರ ಕೋರಿದ್ದ ಅರ್ಜಿಯ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದರು. ‘ಸಾರ್ವಜನಿಕರ ತೆರಿಗೆ ಹಣವನ್ನು ನಿರ್ದಿಷ್ಟ ಧರ್ಮದ ಪರವಾಗಿ ಬಳಸಬಾರದು ಎಂಬ ಸಂವಿಧಾನದ ಆಶಯವು ಈ ಆದೇಶದಿಂದ ಉಲ್ಲಂಘನೆಯಾಗಲಿದೆ’ ಎಂದು ಹೇಳಿದರು.</p>.<p>1993ರಲ್ಲಿ ಅಖಿಲ ಭಾರತ ಇಮಾಮ್ಗಳ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ತಾನು ನಿರ್ವಹಿಸುವ ಮಸೀದಿಗಳ ಇಮಾಮ್ಗಳಿಗೆ ಗೌರವಧನ ನೀಡಬೇಕು ಎಂದು ವಕ್ಫ್ ಮಂಡಳಿಗೆ ಆದೇಶಿಸಿತ್ತು.</p>.<p>‘ಈ ಆದೇಶದ ಪ್ರತಿಯನ್ನು ಕೇಂದ್ರ ಕಾನೂನು ಸಚಿವರಿಗೆ ಕಳುಹಿಸಬೇಕು.ಪೂಜೆ, ಪ್ರಾರ್ಥನೆ ನೆರವೇರಿಸುವ ವಿವಿಧ ಧರ್ಮದವರಿಗೆ ಗೌರವಧನ ನೀಡಲು ತೆರಿಗೆ ಹಣ ಬಳಸದಂತೆ ಕ್ರಮವಹಿಸಲು ಸಂವಿಧಾನದ 25 ರಿಂದ 28ನೇ ವಿಧಿಯ ನಿಯಮಗಳನ್ನು ಅದರ ಮೂಲ ಆಶಯಗಳೊಂದಿಗೆ ಜಾರಿಗೊಳಿಸಬೇಕು’ ಎಂದು ಸೂಚಿಸಿದರು.</p>.<p>‘ಗೌರವಧನ ನೀಡುವ ಕುರಿತಂತೆ ಸುಪ್ರೀಂ ಕೋರ್ಟ್ 1993ರಲ್ಲಿ ನೀಡಿದ್ದ ಆದೇಶವನ್ನು ಉಲ್ಲೇಖಿಸಿದ ಅವರು, ತೆರಿಗೆ ಹಣವನ್ನು ನಿರ್ದಿಷ್ಟ ಧರ್ಮದ ಪರವಾಗಿ ಬಳಸಬಾರದು ಎಂಬ ಸಂವಿಧಾನದ ವಿಧಿ 27ರ ಉಲ್ಲಂಘನೆಯಾಗಿದೆ’ ಎಂದು ಮಾಹಿತಿ ಆಯುಕ್ತರು ಅಭಿಪ್ರಾಯಪಟ್ಟರು.</p>.<p>‘ಈ ಅದೇಶವು ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡಲಿದೆ. ಅನಗತ್ಯ ರಾಜಕೀಯ ತಿಕ್ಕಾಟ ಹಾಗೂ ಸಮಾಜದಲ್ಲಿ ಸಾಮಾಜಿಕ ಸೌಹಾರ್ದ ಕದಡಲು ಕಾರಣವಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>